“ಮಕ್ಕಳನ್ನು ಬೆಳೆಸುವುದೂ ಒಂದು ಕಲೆ” – ಸುಧಾ ಮೂರ್ತಿಯವರ ಅರ್ಥಗರ್ಭಿತವಾದ ಮಾತು

ಶೇರ್ ಮಾಡಿ

ಮಕ್ಕಳು ದೊಡ್ಡವರಾದ ಮೇಲೆ ಅವರನ್ನು ಸ್ನೇಹಿತರಂತೆ ಕಾಣಬೇಕು ಎನ್ನುವ ಮಾತಿದೆ. ಏಕೆಂದರೆ ನಮ್ಮದೇ ಮಕ್ಕಳ ಆಲೋಚನೆಗಳು ನಮಗಿಂತ ವಿಭಿನ್ನವಾಗಿರುತ್ತವೆ. ಅವರು ನಮಗಿಂತಲೂ ಸರಿಯಾಗಿ ಆಲೋಚನೆ ಮಾಡುವ ಸಾಮರ್ಥ್ಯ ಹೊಂದಿರುತ್ತಾರೆ. ಅಂತಹ ಸಂದರ್ಭದಲ್ಲಿ ಎಂದಿಗೂ ಪೋಷಕರಾದ ನಾವುಗಳು ಕೇವಲ ನಮ್ಮ ಮಾತು ಮಾತ್ರ ನಡೆಯಬೇಕು ಎಂದು ಅಂದುಕೊಳ್ಳಬಾರದು.
ಕೇವಲ ಇದೊಂದೇ ವಿಷಯವಲ್ಲ. ಎಲ್ಲಾ ಆಯಾಮದಲ್ಲೂ ಮಕ್ಕಳನ್ನು ಪ್ರೀತಿಯಿಂದ ಕಾಣಬೇಕು, ಮಕ್ಕಳ ಮಾತಿಗೆ ಬೆಲೆ ಕೊಡಬೇಕು, ಮಕ್ಕಳು ತಪ್ಪು ಮಾಡಿದಾಗ ಹೇಳುವ ರೀತಿಯಲ್ಲಿ ತಿದ್ದಿ ಹೇಳಬೇಕು.

ಮಕ್ಕಳಿಗೆ ಪ್ರೈವಸಿ ಕೊಡಿ
ನಾವು ಮತ್ತು ನಮ್ಮ ಮಕ್ಕಳು ಒಂದೇ ವಿಷಯವನ್ನು ಬೇರೆ ಬೇರೆ ಆಯಾಮದಲ್ಲಿ ಆಲೋಚನೆ ಮಾಡುತ್ತೇವೆ. ಆದರೆ ನಮ್ಮ ಮತ್ತು ಅವರ ಅಭಿಪ್ರಾಯಗಳ ನಡುವೆ ಜಗಳ ಉಂಟಾಗುವ ಹಾಗೆ ಇರಬಾರದು.

ಯಾವುದಾದರೂ ನಿರ್ಧಾರ ತೆಗೆದುಕೊಳ್ಳಬೇಕಾದರೆ ಒಂದಲ್ಲ ಎರಡು ಬಾರಿ ನೀವೇ ಆಲೋಚಿಸಿ. ಮಕ್ಕಳ ಇಷ್ಟ ಕಷ್ಟಗಳನ್ನು ಅರ್ಥ ಮಾಡಿಕೊಳ್ಳಿ.

ಕೆಲವೊಂದು ವಿಷಯ ಗಳು ಮಕ್ಕಳಿಗೆ ಇಷ್ಟವಾಗುವು ದಿಲ್ಲ. ಅದು ತಿಂಡಿ ತಿನ್ನುವ ವಿಚಾರದಲ್ಲೂ ಆಗಿರ ಬಹುದು. ಹಾಗಾಗಿ ಮಕ್ಕಳನ್ನು ಬಲವಂತ ಮಾಡು ವುದು ಬೇಡ. ಅವರ ಅಭಿರುಚಿಗೆ ತಕ್ಕಂತೆ ಆಹಾರ ನೀಡಿ.​

ಮಕ್ಕಳಲ್ಲಿ ಕಲಿಕಾ ಆಸಕ್ತಿ ಮೂಡಿಸುವುದು ಹೇಗೆ?
ಯಾವುದಾದರೂ ವಿಚಾರಕ್ಕೆ ನಿಮ್ಮ ಮಕ್ಕಳನ್ನು ಬಲವಂತ ಮಾಡಬೇಡಿ. ಇಂತಹದೇ ವಿಷಯವನ್ನು ನೀವು ಅನುಸರಿಸಬೇಕು ಎಂದು ತಾಕೀತು ಮಾಡಬೇಡಿ. ಮಕ್ಕಳಿಗೆ ಉದಾಹರಣೆಗಳ ರೂಪದಲ್ಲಿ ಆಯ್ಕೆಗಳನ್ನು ಕೊಡಿ. ಅವರಿಗೆ ಇಷ್ಟವಾದರೆ ನೀವು ಹೇಳದಿದ್ದರೂ ಅವರೇ ಅನುಸರಿಸುತ್ತಾರೆ.

ನಡತೆಯ ಮೂಲಕ ಮಕ್ಕಳನ್ನು ಆಕರ್ಷಿಸುವುದು ಉತ್ತಮ
ಇನ್ನು ಕೆಲವು ವಿಚಾರಗಳನ್ನು ನಿಮ್ಮನ್ನು ನೋಡಿ ಪಾಲಿಸುತ್ತಾರೆ. ಹಾಗಾಗಿ ನಿಮ್ಮ ಆಯ್ಕೆ ಕೂಡ ಸರಿ ಇರಬೇಕು. ಉದಾಹರಣೆಗೆ ನಿಮ್ಮ ಮಗು ಸಂಜೆ ಮನೆಗೆ ಬಂದ ತಕ್ಷಣ ಓದು ಓದು ಎಂದು ಬಲವಂತ ಮಾಡುವ ಬದಲು ನೀವೇ ಒಂದು ಪುಸ್ತಕ ಇಟ್ಟುಕೊಂಡು ಓದುತ್ತಾ ಕುಳಿತುಕೊಳ್ಳಿ.

ನಿಮ್ಮನ್ನು ನೋಡಿ ನಿಮ್ಮ ಮಕ್ಕಳು ಸಹ ಇಷ್ಟಪಟ್ಟು ಓದುತ್ತಾರೆ. ಇಂತಹ ಹಲವಾರು ವಿಚಾರಗಳನ್ನು ನಿಮ್ಮನ್ನು ನೋಡಿ ನಿಮ್ಮ ಮಕ್ಕಳು ಕಲಿಯಲು ಬಯಸುತ್ತಾರೆ.

ಹಾಗಾಗಿ ನೀವು ಬಾಯಲ್ಲಿ ಬಲವಂತವಾಗಿ ಹೇಳಿ ಮಾಡಿಸುವುದಕ್ಕಿಂತ ನಿಮ್ಮ ನಡೆಯ ಮೂಲಕ ಮಕ್ಕಳನ್ನು ಆಕರ್ಷಿಸುವುದು ಉತ್ತಮ.​

ಸಿಂಪಲ್ ಆಗಿ ಬದುಕಿ
ನಿಮ್ಮ ಮಕ್ಕಳಿಗೆ ಎಷ್ಟು ಸಿಂಪ್ಲಿಸಿಟಿ ಕಲಿಸುತ್ತೀರಿ ಅಷ್ಟು ಕೂಡ ನಿಮಗೆ ಒಳ್ಳೆಯದು. ಏಕೆಂದರೆ ಚಿಕ್ಕ ವಯಸ್ಸಿಗೆ ಮಕ್ಕಳಿಗೆ ಎಲ್ಲಾ ಬಗೆಯ ಸವಲತ್ತುಗಳನ್ನು ಒದಗಿಸಿದರೆ ಮಕ್ಕಳಿಗೆ ಕಷ್ಟ ಸುಖದ ಅರಿವು ಆಗುವುದಿಲ್ಲ.

ಹಾಗಾಗಿ ಮಕ್ಕಳ ಬದುಕು ಸಿಂಪಲ್ ಆಗಿರಬೇಕು ಮತ್ತು ಆಲೋಚನೆ ಮಾತ್ರ ದೊಡ್ಡದಾಗಿರಬೇಕು. ಅದು ಒಂದು ಆಹಾರ ಸೇವನೆಯ ವಿಚಾರದಲ್ಲಿ ಆಗಿರಬಹುದು, ಮನೆ ಅಲಂಕಾರಕ ವಿಷಯ ಆಗಿರಬಹುದು ಅಥವಾ ನಿಮ್ಮ ಮಕ್ಕಳು ಹೇಗಿರಬೇಕು ಎಂಬ ವಿಚಾರ ಕೂಡ ಆಗಿರಬಹುದು.​

ಸಹಬಾಳ್ವೆಯನ್ನು ರೂಢಿಸಿ
ಮಕ್ಕಳಿಗೆ ಯಾವುದೇ ಕಾರಣಕ್ಕೂ ಶ್ರೀಮಂತ ಬಡವ ಎನ್ನುವ ಭಾವನೆ ಮನಸ್ಸಿನಲ್ಲಿ ಮೊಳಕೆ ಒಡೆಯ ದಂತೆ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿ.

ಏಕೆಂದರೆ ಇದು ಮುಂದಿನ ದಿನಗಳಲ್ಲಿ ನಿಮ್ಮ ಮಗುವಿನ ಆಲೋಚನೆಗಳನ್ನು ಸಂಪೂರ್ಣವಾಗಿ ಬದಲಿಸಿಬಿಡುತ್ತದೆ ಮತ್ತು ನಿಮ್ಮ ಮಗು ನಿಮ್ಮ ಕೈಗೆ ಸಿಗದಂತೆ ಕೂಡ ಮಾಡಿಬಿಡುತ್ತದೆ.

ಹಾಗಾಗಿ ನಿಮ್ಮ ಮನೆಯ ಕೆಲಸದ ಅಳುಗಳನ್ನು ಕೂಡ ಪ್ರೀತಿ, ಗೌರವ ಆದರದಿಂದ ಕಾಣುವ ಬುದ್ಧಿ ಕಲಿಸಿ. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಗುಣ ನಿಮ್ಮ ಮಗುವಿನಲ್ಲಿ ಬಂದರೆ ಎಷ್ಟೋ ಉತ್ತಮ.

24 ಗಂಟೆಯೂ ಕೇವಲ ಮಗುವಿನ ಬಗ್ಗೆ ಆಲೋಚನೆ ಬೇಡ!
ತಂದೆ ತಾಯಂದಿರಿಗೆ ತಮ್ಮ ಮಕ್ಕಳ ಬಗ್ಗೆ ಪ್ರೀತಿ ಇರುತ್ತದೆ ನಿಜ. ನಮ್ಮ ಮಕ್ಕಳು ಯಾರ ಮುಂದೆಯೂ ತಲೆತಗ್ಗಿಸಬಾರದು ಎನ್ನುವ ಬಯಕೆ ಕೂಡ ಇರುತ್ತದೆ.

ಹಾಗೆಂದು ಪ್ರತಿ ವಿಷಯಕ್ಕೂ ಮಕ್ಕಳನ್ನು ಟಾರ್ಗೆಟ್ ಮಾಡುವುದು ಸರಿಯಲ್ಲ. ಪ್ರತಿ ಬಾರಿ ಬುದ್ದಿ ಹೇಳು ವುದು ಕೂಡ ಅತಿಯಾಗುತ್ತದೆ. ಪ್ರತಿಯೊಂದು ಚಟು ವಟಿಕೆಯಲ್ಲೂ ನೀನು ಮುಂದಿರಬೇಕು ಎಂದು ಒತ್ತಡ ಹೇರುವುದು ತಪ್ಪಾಗುತ್ತದೆ.

ಹಾಗಾಗಿ ಮಕ್ಕಳಿಗೆ ಅವರದೇ ಆದ ರೀತಿಯಲ್ಲಿ ಆಲೋಚನೆ ಮಾಡಲು ಬಿಡಿ. ಅವರಿಗೆ ಇಷ್ಟವಾದ ಆಯ್ಕೆಯನ್ನು ಅವರೇ ಮಾಡಿಕೊಳ್ಳಲಿ. ಏಕೆಂದರೆ ದೇವರು ಪ್ರತಿಯೊಂದು ಮಗುವಿಗೂ ತನ್ನದೇ ಆದ ಕಲೆಯನ್ನು ಕೊಟ್ಟಿರುತ್ತಾನೆ.

ಹಾಗಾಗಿ ಎಲ್ಲರೂ ಡಾಕ್ಟರ್, ಇಂಜಿನಿಯರ್ ಆಗಲು ಸಾಧ್ಯವಿಲ್ಲ. ಅವರವರ ಇಷ್ಟವಾದ ಕ್ಷೇತ್ರಗಳನ್ನು ಅವರು ಆಯ್ಕೆ ಮಾಡಿಕೊಳ್ಳಲು ನೀವು ಅವಕಾಶ ಕೊಡಿ.

ಸಣ್ಣ ಪುಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಲಿ
ಜೀವನದಲ್ಲಿ ಸಣ್ಣ ಪುಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಲು ಮಕ್ಕಳಿಗೂ ಸಹ ಅವಕಾಶ ಕೊಡಿ. ಏಕೆಂದರೆ ಇದರಿಂದ ಮಕ್ಕಳಿಗೆ ಸಂದರ್ಭ ಹೇಗಿದೆ ಎಂಬುದರ ಒಳನೋಟ ಅರ್ಥವಾಗುತ್ತದೆ.

ಇಂತಹ ಸಂದರ್ಭ ಮುಂದೆ ಎಂದಾದರೂ ಬಂದಾಗ ಅದನ್ನು ಹೇಗೆ ನಿರ್ವಹಿಸಬೇಕು ಎಂಬ ಚಾಣಾಕ್ಷತನ ಬರುತ್ತದೆ.

ಒಂದು ವೇಳೆ ನಿಮ್ಮ ಮಗು ತಪ್ಪು ನಿರ್ಧಾರವನ್ನು ತೆಗೆದುಕೊಂಡರೆ ಅದನ್ನು ತಿಳಿಸಿ ಹೇಳಿ. ಇದರಿಂದ ನಿಮ್ಮ ಮಗುವಿನ/ ಮಕ್ಕಳ ಬುದ್ಧಿ ಬೆಳವಣಿಗೆಯಾಗುತ್ತದೆ ಮತ್ತು ನಿಮಗೂ ಸಹ ಇದರಿಂದ ಪ್ರಯೋಜನವಿದೆ.​

Leave a Reply

error: Content is protected !!