![](https://i0.wp.com/nesaranewsworld.com/wp-content/uploads/2023/06/TUTORIYAL-2.jpg-add-2.jpg?resize=1024%2C576&ssl=1)
![](https://i0.wp.com/nesaranewsworld.com/wp-content/uploads/2023/04/WhatsApp-Image-2023-04-23-at-20.18.23.jpg?resize=448%2C643&ssl=1)
ಉಡುಪಿ: ಮನ್ನೋಳ್ಳಿ ಗುಜ್ಜಿ ವಾದಿರಾಜ ನಗರದ ಐದನೇ ಮುಖ್ಯರಸ್ತೆಯಲ್ಲಿರುವ ಸ್ಥಳೀಯರಿಂದ ರಸ್ತೆ ಬದಿಯಲ್ಲಿ ಪಾರಿಜಾತ ಗಿಡಗಳನ್ನು ನೆಡುವುದರ ಮುಖಾಂತರ ವನಮಹೋತ್ಸವವನ್ನು ಆಚರಿಸಲಾಯಿತು ۔
![](https://i0.wp.com/nesaranewsworld.com/wp-content/uploads/2023/06/WhatsApp-Image-2023-06-18-at-5.33.21-PM.jpeg?resize=634%2C355&ssl=1)
ಈ ಪ್ರಯುಕ್ತ ಕಡಿಯಾಳಿ ಕಮಲಬಾಯಿ ಪ್ರೌಢಶಾಲೆಯ ರಿಟೈರ್ಡ್ ಮುಖ್ಯೋಪಾಧ್ಯಾಯ ಸೀತರಾಮ ಮೆಹಂದಲೇ ಇವರಿಂದ ಗಿಡ ನೆಟ್ಟು ತಮ್ಮ ತಮ್ಮ ಮನೆಯ ಎದುರುಗಡೆ ರಸ್ತೆ ಬದಿಯಲ್ಲಿ ಗಿಡಗಳನ್ನು ನೋಡುವುದೇ ಒಂದು ಚೆಂದ ಜೊತೆಯಲ್ಲಿ ಒಳ್ಳೆಯ ಗಾಳಿ ಹಾಗೂ ನೆರಳು ಸಿಗುತ್ತದೆ ಎಂದರು.
![](https://i0.wp.com/nesaranewsworld.com/wp-content/uploads/2023/06/WhatsApp-Image-2023-06-18-at-5.19.53-PM-2.jpeg?resize=613%2C460&ssl=1)
ಕೆನರಾ ಬ್ಯಾಂಕಿನ ನಿವೃತ್ತ ಸೀನಿಯರ್ ಮ್ಯಾನೇಜರ್ ಶ್ರೀ ಜನಾರ್ಧನ ಭಟ್ ಗಿಡಕ್ಕೆ ನೀರುಣಿಸಿ ಪ್ರತಿನಿತ್ಯ ಪ್ರತಿಯೊಬ್ಬರು ತಮ್ಮ ತಮ್ಮ ಮನೆಯ ಎದುರುಗಡೆ ಇರುವ ಗಿಡಗಳಿಗೆ ನೀರು ಹಾಕಿ ಪೋಷಣೆ ಮಾಡಿ ಎಂದು ಸಲಹೆ ನೀಡಿದರು ۔ ಪ್ರತಿಯೊಬ್ಬರು ಗಿಡಗಳನ್ನು ನೆಟ್ಟು ಪಾಲನೆ ಮಾಡಿದ್ದಲ್ಲಿ ನಿಜವಾದ ವನಮಹೋತ್ಸವಕ್ಕೆ ಅರ್ಥವನ್ನು ನೀಡುತ್ತದೆ ಎಂದರು ۔ ನಿವೃತ್ತ ಸಿಂಡಿಕೇಟ್ ಬ್ಯಾಂಕ್ ಅಧಿಕಾರಿ ಶ್ರೀ ವೆಂಕಟೇಶ್ ಮೆಹಂದಲೇ , ನಿವೃತ್ತಎಲ್ಐಸಿ ಅಧಿಕಾರಿ ದೇವಣ್ಣ ಪೈ , ಸ್ಟಾರ್ ಹೆಲ್ತ್ ಇನ್ಸೂರೆನ್ಸ್ ನ ಸೀನಿಯರ್ ಮ್ಯಾನೇಜರ್ ಸೇಲ್ಸ್ ಹಾಗೂ ಜೆಸಿಐ ಇಂಡಿಯಾದ ಉಡುಪಿ ಸಿಟಿಯ ಪೂರ್ವ ಅಧ್ಯಕ್ಷ ವಲಯ ಅಧಿಕಾರಿ ಉದಯ ನಾಯ್ಕ್ , ಶ್ರೀಮತಿ ವಿಜಯ ಮೆಹೆಂದಲೇ , ಶ್ರೀಮತಿ ಶುಭ ಮಹೇಂದಲೇ , ಸುಖಾಂತ್, ಆಯುಷ್, ಮುಂತಾದವರು ಉಪಸ್ಥಿತರಿದ್ದರು.
![](https://i0.wp.com/nesaranewsworld.com/wp-content/uploads/2023/03/WhatsApp-Image-2023-03-06-at-6.15.00-PM.jpeg?resize=456%2C723&ssl=1)
![](https://i0.wp.com/nesaranewsworld.com/wp-content/uploads/2023/05/Untitled-3.jpg?resize=460%2C818&ssl=1)