ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಸಿಇಟಿ,ನೀಟ್ ವಿಶೇಷ ತರಗತಿಗಳ ಉದ್ಘಾಟನೆ ಮತ್ತು ಉಪನ್ಯಾಸ

ಶೇರ್ ಮಾಡಿ

ಶ್ರೀರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಸಿಇಟಿ- ನೀಟ್ ತರಗತಿಗಳ ಉದ್ಘಾಟನಾ ಸಮಾರಂಭವು ನಡೆಯಿತು.

ತರಬೇತಿ ತರಗತಿಗಳ ಉದ್ಘಾಟನೆಯನ್ನು ಪ್ರಖ್ಯಾತ ತರಬೇತುದಾರರಾದ ಶೃತಕೀರ್ತಿ ಜೈನ್ ಇವರು ನೆರವೇರಿಸಿದರು. ಅವರು, ‘ವಿಜ್ಞಾನ ವಿಭಾಗದ ವಿದ್ಯಾರ್ಥಿಗಳ ಕೆರಿಯರ್ ಪ್ಲಾನಿಂಗ್’ ಎಂಬ ವಿಷಯವಾಗಿ ಉಪನ್ಯಾಸವನ್ನು ನೀಡಿದರು. ಅವರು ಮಾತನಾಡುತ್ತಾ “ವಿದ್ಯಾರ್ಥಿಗಳು ಅವಕಾಶಗಳನ್ನ ಹುಡುಕಬೇಕು ಮತ್ತು ಸೃಷ್ಟಿಸಿಕೊಳ್ಳಬೇಕು. ತಮಗೆ ಪ್ರಿಯವಾದಂತಹ ಆಟ, ನಿದ್ದೆ, ಮೊಬೈಲ್, ಟಿವಿ ಇವೆಲ್ಲವನ್ನ ಕೆಲವು ಸಮಯಗಳವರೆಗೆ ತ್ಯಜಿಸಿ, ತಪಸ್ಸಿನ ರೀತಿಯಲ್ಲಿ ಸಿಇಟಿ, ನೀಟ್, ಜೆಇಇ ಅಥವಾ ಯಾವುದೇ ಪರೀಕ್ಷೆಗೆ ತಯಾರಾಗಬೇಕು. ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸ್ಪರ್ಧೆ ಇರುವಂತೆ ಅವಕಾಶವೂ ಇದೆ. ನಮ್ಮ ತರಬೇತಿಯಲ್ಲಿ ಇಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉತ್ತಮ ರೀತಿಯಲ್ಲಿ ತಯಾರಾಗುವುದನ್ನು ವಿದ್ಯಾರ್ಥಿಗಳಿಗೆ ಹೇಳಿಕೊಡಲಾಗುತ್ತದೆ. ಮುಖ್ಯವಾಗಿ ಪ್ರಶ್ನೆಗಳಿಗೆ ಸುಲಭ ರೀತಿಯಲ್ಲಿ ಕಡಿಮೆ ಅವಧಿಯಲ್ಲಿ ಉತ್ತರಿಸುವುದು ಹೇಗೆ ಎಂದು ಕೂಡ ನಾವು ಹೇಳಿಕೊಡುತ್ತೇವೆ ಅದು ನಮ್ಮ ಮೂಲ ಉದ್ದೇಶವೂ ಆಗಿದೆ. ಇದರ ಸದುಪಯೋಗವನ್ನ ನೀವೆಲ್ಲರೂ ಮಾಡಬೇಕು.” ಎಂದು ಹೇಳಿದರು.

ಕಾಲೇಜಿನ ಕಾರ್ಯದರ್ಶಿಗಳಾದ ರಾಧಾಕೃಷ್ಣ ಕೆ.ಎಸ್ ಅಧ್ಯಕ್ಷೀಯ ನುಡಿಗಳನ್ನು ಆಡಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಚಂದ್ರಶೇಖರ್ ಕೆ ಮತ್ತು ವಿಜ್ಞಾನ ವಿಭಾಗದ ಉಪನ್ಯಾಸಕರು ಉಪಸ್ಥಿತರಿದ್ದರು.
ಸಿ ಇ ಟಿ ನೀಟ್ ತರಗತಿಗಳ ಸಂಯೋಜಕರಾದ ಸುಬ್ರಹ್ಮಣ್ಯ ಕಾರಂತ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿಯಾದ ಶ್ರೀಮತಿ ಸ್ವಾತಿ ವಂದನಾರ್ಪಣೆಗೈದರು.

Leave a Reply

error: Content is protected !!