ರೈಲಿನಲ್ಲಿ ಮೊಬೈಲ್‌ ಕಸಿಯಲು ಬಂದವರೊಂದಿಗೆ ವಾಗ್ವಾದ: ಕೆಳಕ್ಕೆ ಬಿದ್ದು ಯುವತಿ ಮೃತ್ಯು

ಶೇರ್ ಮಾಡಿ

ಚೆನ್ನೈ: ರೈಲಿನಲ್ಲಿ ಮೊಬೈಲ್‌ ಕಸಿಯಲು ಬಂದ ವ್ಯಕ್ತಿಗಳೊಂದಿಗೆ ವಾಗ್ವಾದ ನಡೆಸಿದ ವೇಳೆ ಕೆಳಕ್ಕೆ ಬಿದ್ದು ಯುವತಿಯೊಬ್ಬಳು ಮೃತಪಟ್ಟರುವ ಘಟನೆ ಚೆನ್ನೈನಲ್ಲಿ ನಡೆದಿದೆ.
ಎಸ್.ಪ್ರೀತಿ (22) ಮೃತ ಯುವತಿ.

ಜು.2 ರಂದು ಸ್ಥಳೀಯ ರೈಲಿನಲ್ಲಿ ಪ್ರೀತಿ ಪ್ರಯಾಣಿಸುತ್ತಿದ್ದಳು. ಚೆನ್ನೈನ ಇಂದಿರಾ ನಗರ ನಿಲ್ದಾಣದಲ್ಲಿ ರೈಲಿನ ಫುಟ್‌ಬೋರ್ಡ್‌ನಲ್ಲಿ ನಿಂತುಕೊಂಡು ಅವಳು ಫೋನಿನಲ್ಲಿ ಮಾತನಾಡಲು ತೊಡಗಿದ್ದಾಳೆ. ಇದೇ ವೇಳೆ ಇಬ್ಬರು ಬಂದು ಆಕೆಯ ಮೊಬೈಲ್‌ ಫೋನ್‌ ನ್ನು ಕಸಿಯಲು ಯತ್ನಿಸಿದ್ದಾರೆ. ಮಾತು ಮಾತಿಗೆ ಬೆಳೆದು ಮೊಬೈಲ್‌ ಕಸಿಯುವಾಗ ರೈಲಿನಿಂದ ಪ್ರೀತಿ ಕೆಳಕ್ಕೆ ಬಿದ್ದಿದ್ದಾಳೆ. ಆರೋಪಿಗಳು ಮೊಬೈಲ್‌ ಕಸಿದುಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ.
ರೈಲಿನಿಂದ ಪ್ಲಾಟ್‌ಫಾರ್ಮ್‌ಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪ್ರೀತಿ ಬಿದ್ದಿದ್ದಾಳೆ. ಅಪಘಾತದಿಂದ ತಲೆಗೆ ತೀವ್ರ ಗಾಯವಾಗಿದ್ದು, ಘಟನೆ ನಡೆದ ದಿನದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪ್ರೀತಿ ಶನಿವಾರ (ಜು.8 ರಂದು) ಮೃತಪಟ್ಟಿದ್ದಾಳೆ.
ಇತ್ತ ಘಟನೆ ಬಗ್ಗೆ ತನಿಖೆ ಆರಂಭಿಸಿದ ಪೊಲೀಸರು ಸೈಬರ್‌ ಕ್ರೈಮ್‌ ವಿಭಾಗದ ಸಹಾಯ ಪಡೆದು ಕಾಲ್‌ ರೆಕಾರ್ಡ್ಸ್‌ ಹಾಗೂ ಮೊಬೈಲ್‌ ನ ಲೊಕೇಶನ್‌ ಪತ್ತೆ ಹಚ್ಚಿದ್ದಾರೆ. ಮೊಬೈಲ್‌ ಲೊಕೇಶನ್ ಬೆಸೆಂಟ್ ನಗರದ ಮೀನು ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ರಾಜು ಎಂಬ ವ್ಯಕ್ತಿಯ ಬಳಿಗೆ ಪೊಲೀಸರನ್ನು ಕರೆದೊಯ್ದಿದೆ. ಈ ವೇಳೆ ಮೊಬೈಲ್‌ ಫೋನ್ ರಾಜು ಅವರಿಗೆ ಇಬ್ಬರು ವ್ಯಕ್ತಿಗಳು 2000 ರೂ.ಗೆ ಮಾರಾಟ ಮಾಡಿದ್ದಾರೆ ಎನ್ನುವುದು ಗೊತ್ತಾಗಿದೆ.
ತನಿಖೆ ಮುಂದುವರಿಸಿದ ಪೊಲೀಸರು ಮಣಿಮಾರನ್ ಮತ್ತು ವಿಘ್ನೇಶ್ ಎಂಬುವವರನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಪ್ರೀತಿಯಿಂದ ಫೋನ್ ಕದ್ದಿರುವುದಾಗಿ ಇಬ್ಬರು ತಪ್ಪೊಪ್ಪಿಕೊಂಡಿದ್ದು, ಇದರಿಂದ ಆಕೆ ರೈಲಿನಿಂದ ಬಿದ್ದಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Leave a Reply

error: Content is protected !!