ಗೃಹಲಕ್ಷ್ಮಿ ನೋಂದಣಿಗೆ ಇನ್ನು ಮುಂದೆ ಎಸ್‌ಎಂಎಸ್‌ ಕಳುಹಿಸುವುದಿಲ್ಲ : ಸಂದೇಶಕ್ಕೆ ಕಾಯಬೇಕಿಲ್ಲ

ಶೇರ್ ಮಾಡಿ

ಗೃಹಲಕ್ಷ್ಮಿ ಯೋಜನೆ ನೋಂದಣಿಗೆ ಇನ್ನು ಮುಂದೆ ಪಲಾನುಭವಿಗಳಿಗೆ ಎಸ್‌ಎಂಎಸ್‌ ಕಳುಹಿಸುವುದಿಲ್ಲ. ಹತ್ತಿರದ ಗ್ರಾಮ ಒನ್‌, ಗ್ರಾ.ಪಂ. ಬಾಪೂಜಿ ಸೇವಾ ಕೇಂದ್ರ, ಕರ್ನಾಟಕ ಒನ್‌, ನಗರದ ವಾರ್ಡ್‌ ಕಚೇರಿ ಕೇಂದ್ರದಲ್ಲಿ ನೋಂದಣಿ ಮಾಡಿಸಿಕೊಳ್ಳಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರ ಪ್ರಕಟನೆ ತಿಳಿಸಿದೆ.

ಗೃಹಲಕ್ಷ್ಮಿ ಯೋಜನೆಗೆ ನೋಂದಣಿಗೆ ಸರ್ವರ್‌ ಸಮಸ್ಯೆ, ತಾಂತ್ರಿಕ ತೊಡಕು ಮತ್ತು ಇಲಾಖೆಯಿಂದ ಸಂದೇಶ ಬಾರದೇ ಇರುವುದರಿಂದ ನೋಂದಣಿ ಸಾಧ್ಯವಾಗುತ್ತಿಲ್ಲ. ಮಹಿಳೆಯರು ಗಂಟೆಗಟ್ಟಲೆ ಕಾದು ವಾಪಸ್‌ ಮನೆಗೆ ಹೋಗುತ್ತಿರುವ ಬಗ್ಗೆ ಇಲಾಖೆಯ ಗಮನಕ್ಕೆ ಬಂದಿದ್ದು.

ಅದರಂತೆ, ಈಗ ಯೋಜನೆ ನೋಂದಣಿಗಾಗಿ ಇಲಾಖೆಯ ಸಂದೇಶಕ್ಕಾಗಿ ಕಾಯುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
ಆಧಾರ್‌ ಕಾರ್ಡ್‌, ರೇಷನ್‌ ಕಾರ್ಡ್‌ ಸಹಿತ ಎಲ್ಲ ದಾಖಲೆಗಳೊಂದಿಗೆ ತಮ್ಮ ಗ್ರಾ.ಪಂ ವ್ಯಾಪ್ತಿಯ ಗ್ರಾಮ ಒನ್‌ ಕೇಂದ್ರ ಮತ್ತು ನಗರ ಪ್ರದೇಶದ ವ್ಯಾಪ್ತಿಯ ಕರ್ನಾಟಕ ಒನ್‌, ನಗರ ಸಭೆ ಉಪ ಕಚೇರಿಗೆ ಭೇಟಿ ನೀಡಿದ್ದರು. ಇಲಾಖೆ ಸಂದೇಶ ಬಂದಿಲ್ಲ ಎಂಬ ಕಾರಣಕ್ಕೆ ನೋಂದಣಿ ಆಗುತ್ತಿರಲಿಲ್ಲ. ಇದರಿಂದ ಸಾಕಷ್ಟು ಮಹಿಳೆಯರಿಗೆ ಸಮಸ್ಯೆಯೂ ಆಗುತಿತ್ತು. ಇನ್ನು ಮುಂದೆ ಇಲಾಖೆಯ ಸಂದೇಶಕ್ಕಾಗಿ ಕಾಯುವ ಅಗತ್ಯವಿಲ್ಲ.

Leave a Reply

error: Content is protected !!