ಜೇಸಿಐ ಇಂಡಿಯ ವಲಯ 15ರ 2022ನೇ ಸಾಲಿನ ವಲಯ ಪದಾಧಿಕಾರಿಗಳ ಪದಪ್ರಧಾನ ಸಮಾರಂಭ

ಶೇರ್ ಮಾಡಿ

ನೇಸರ ಜ.23: ಜೇಸಿಐ ಇಂಡಿಯ ವಲಯ 15ರ 2022ನೇ ಸಾಲಿನ ವಲಯ ಪದಾಧಿಕಾರಿಗಳ ಪದಪ್ರಧಾನ ಸಮಾರಂಭವು ದಿನಾಂಕ 22-01-22 ರಂದು ಸಂಜೆ 5.00ಕ್ಕೆ ಮಡಂತ್ಯಾರಿನ ಸೇಕ್ರೆಡ್ ಹಾರ್ಟ್ ಕಮ್ಯುನಿಟಿ ಹಾಲ್ ನಲ್ಲಿ,ಮಡಂತ್ಯಾರು ಜೇಸಿಐನ ಆತಿಥ್ಯದಲ್ಲಿ, ವಲಯಾಧ್ಯಕ್ಷರಾಗಿ ಆಯ್ಕೆಗೊಂಡ ಜೇಸಿಐ ಸೆನೆಟರ್ ರಾಯನ್ ಉದಯ ಕ್ರಾಸ್ತ ರವರ ನಾಯಕತ್ವದಲ್ಲಿ ಸಮಾರಂಭವನ್ನು ದೀಪ ಪ್ರಜ್ವಲನೆ ಮಾಡುವ ಮೂಲಕ ರೇ.ಫಾದರ್.ಬಾಸಿಲ್ ವಾಸ್,ಧರ್ಮಗುರುಗಳು ಸೇಕ್ರೆಡ್ ಹಾರ್ಟ್ ಚರ್ಚ್ ಮಡಂತ್ಯಾರು,ಉದ್ಘಾಟಿಸಿ ಮಾತನಾಡಿದ ಅವರು ಜೇಸಿಐ ಸಂಸ್ಥೆಯು ಯುವಕರನ್ನು ಹೊಂದಿರುವಂತಹ ಸಂಸ್ಥೆ,ಯುವಕರಲ್ಲಿ ನಾಯಕತ್ವ ಗುಣ ಬೆಳೆಸುವ,ಸಂಘಟನೆಯನ್ನು ಒಗ್ಗೂಡಿಸುವ,ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡುವಂತಹ ಸಂಸ್ಥೆ ಇದಾಗಿದೆ, ಯುವಕರು ಹೆಚ್ಚು ಹೆಚ್ಚಾಗಿ ಇಂತಹ ಸಂಸ್ಥೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು, ತಮಗೆ ವಹಿಸಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದರ ಮೂಲಕ, ಈ ಸಂಸ್ಥೆಯಿಂದ ಹಲವಾರು ಉತ್ತಮ ನಾಯಕರುಗಳು ಮೂಡಿಬರಲಿ ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿ ಪಿಪಿಎಫ್.ವ್ಯೆ.ಸುಕುಮಾರ್,ಸದಸ್ಯರು ಜೇಸಿಐ ಇಂಡಿಯಾ ಅಡ್ಮಿನಿಸ್ಟ್ರೇಟಿವ್ ಕಮಿಟಿ,ಇವರು ಮಾತನಾಡಿ ಜೇಸಿಐ ಇಂಡಿಯದಲ್ಲಿ ವಲಯ 15 ಅತ್ಯಂತ ಪ್ರತಿಷ್ಠಿತೆಯ ವಲಯವಾಗಿದೆ,ಹಿರಿಯ ವಲಯಾಧ್ಯಕ್ಷರುಗಳು,ವಲಯ ಉಪಾಧ್ಯಕ್ಷರುಗಳು ಎಲ್ಲರೂ ಒಗ್ಗಟ್ಟಿನಿಂದ ತಮ್ಮ ತಮ್ಮ ಅನುಭವಗಳನ್ನು ವ್ಯಕ್ತ ಪಡಿಸುವುದರ ಮೂಲಕ, ಕಿರಿಯ ಜೇಸಿಗಳಿಗೆ ಮಾರ್ಗದರ್ಶಕರಾಗ ಬೇಕು, ಹೆಚ್ಚು ಹೆಚ್ಚು ಯುವಕರು ಜೇಸಿ ಸಂಸ್ಥೆಗೆ ಸೇರುವಂತೆ ನಾವೆಲ್ಲರೂ ಪ್ರಯತ್ನಿಸಬೇಕು ಎಂಬುದಾಗಿ ಈ ಸಂದರ್ಭದಲ್ಲಿ ತಿಳಿಸಿದರು ಹಾಗೂ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಶುಭವನ್ನು ಹಾರೈಸಿದರು.
ನೂತನವಾಗಿ ಆಯ್ಕೆಯಾದ ವಲಯದ ಪದಾಧಿಕಾರಿಗಳಿಗೆ ವಲಯಾಧ್ಯಕ್ಷರು ಪ್ರಮಾಣ ವಚನವನ್ನು ಭೋಧಿಸಿದರು.

ಕಾರ್ಯಕ್ರಮದ ಮೊದಲಿಗೆ ವಲಯಾಧ್ಯಕ್ಷರನ್ನು ಮೆರವಣಿಗೆ ಮೂಲಕ ವೇದಿಕೆಗೆ ಬರಮಾಡಿಕೊಳ್ಳಲಾಯಿತು.ನಂತರ ಮಾತನಾಡಿದ ಅವರು ಜೇಸಿಐಗೆ ಸೇರ್ಪಡೆಯಾದ ದಿನದಿಂದ ವಲಯಾಧ್ಯಕ್ಷರಾಗಿ ಆಯ್ಕೆಯಾದ ದಿನದ ವರೆಗಿನ ಅವರ ಮತ್ತು ಜೇಸಿಐಯ ಸಂಬಂಧವನ್ನು ತಿಳಿಸಿದರು ಹಾಗೂ ಎಲ್ಲರ ಸಹಕಾರವನ್ನು ಕೋರಿದರು. ವೇದಿಕೆಯಲ್ಲಿ ವಲಯ 15ರ ಜೇಸಿಐನ ಹಾಡನ್ನು ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ವಲಯದ ನಿಕಟಪೂರ್ವ ಅಧ್ಯಕ್ಷರಾದ ಜೇಸಿಐ ಸೆನೆಟರ್ ಸೌಜನ್ಯ ಹೆಗ್ಡೆ,ವಲಯದ ಪೂರ್ವ ಅಧ್ಯಕ್ಷರುಗಳು, ಪೂರ್ವ ವಲಯಾಧಿಕಾರಿಗಳು, ಘಟಕ ಅಧ್ಯಕ್ಷರುಗಳು ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಭಾಗವಹಿಸಿದ್ದರು. ಜೇಸಿಐ ಮಡಂತ್ಯಾರು ಘಟಕಾಧ್ಯಕ್ಷ ಜೇಸಿ ಭರತ್ ಶೆಟ್ಟಿ ಸ್ವಾಗತಿಸಿ,ಕಾರ್ಯದರ್ಶಿ ಅಜಯ್ ಶೆಟ್ಟಿ ಧನ್ಯವಾದವಿತ್ತರು.

ಜಾಹೀರಾತು

Leave a Reply

error: Content is protected !!