![](https://i0.wp.com/nesaranewsworld.com/wp-content/uploads/2023/09/4-ullala-620x372-1.jpg?resize=620%2C372&ssl=1)
ಸೋಮೇಶ್ವರ ಸಮುದ್ರ ಕಿನಾರೆಯ ರುದ್ರಪಾದೆಯಿಂದ ಕಾಲು ಜಾರಿ ಸಿಲುಕಿದ್ದ ಸಹ ವೈದ್ಯನ ರಕ್ಷಣೆಗೆ ತೆರಳಿದ್ದ ವೈದ್ಯರೊಬ್ಬರು ರುದ್ರ ಪಾದೆಯಿಂದ ಜಾರಿ ಸಮುದ್ರಪಾಲಾಗುತ್ತಿದ್ದು ರುದ್ರ ಪಾದೆಯಿಂದ ಮೊದಲು ಜಾರಿದ್ದ ವೈದ್ಯ ಕಲ್ಲು ಹಿಡಿದು ಪ್ರಾಣ ಉಳಿಸಿಕೊಂಡಿದ್ದು, ಸಮುದ್ರಪಾಲದ ಇನ್ನೊಬ್ಬ ವೈದ್ಯನ ಮೃತದೇಹ ಸೆ.4ರ ಸೋಮವಾರ ಬೆಳಗ್ಗೆ ಪತ್ತೆಯಾಗಿದೆ.
ಮೃತ ವೈದ್ಯ ನಗರದ ಎ.ಜೆ ಆಸ್ಪತ್ರೆಯಲ್ಲಿ ಸರ್ಜನ್, ಬೆಂಗಳೂರು ರಾಮನಗರ ನಿವಾಸಿ ಡಾ.ಆಶೀಕ್ ಗೌಡ (30) ಸಮುದ್ರ ಪಾಲಾಗಿ ಮೃತಪಟ್ಟವರು.
ಭಾನುವಾರ ತಡರಾತ್ರಿ ನಗರದಿಂದ ಸೋಮೇಶ್ವರಕ್ಕೆ ಮೃತ ವೈದ್ಯ ಸೇರಿದಂತೆ ಇನ್ನೋರ್ವ ಸರ್ಜನ್ ಕುಂದಾಪುರ ಮೂಲದ ಡಾ.ಪ್ರದೀಶ್ ಮೂವರು ಇಂಟರ್ನ್ ಶಿಪ್ ನಡೆಸುತ್ತಿರುವ ವೈದ್ಯೆಯರ ಜೊತೆಗೆ ಸಮುದ್ರ ವಿಹಾರಕ್ಕೆಂದು ಭಾನುವಾರ ತಡರಾತ್ರಿ ಸೋಮೇಶ್ವರಕ್ಕೆ ಬಂದಿದ್ದರು.
ರುದ್ರಪಾದೆಯಲ್ಲಿ ವಿಹರಿಸುತ್ತಿದ್ದ ಸಂದರ್ಭ ಡಾ.ಪ್ರದೀಶ್ ಕಲ್ಲಿನಿಂದ ಸಮುದ್ರಕ್ಕೆ ಜಾರಿ ಬಿದ್ದಿದ್ದಾರೆ. ನೀರಿನಲ್ಲಿ ನಿಂತು ರಕ್ಷಣೆಗೆ ಕೂಗುತ್ತಿದ್ದ ಸಂದರ್ಭ ಡಾ.ಆಶೀಕ್ ಗೌಡ ಇಣುಕುವ ಕ್ಷಣದಲ್ಲಿ ಕಾಲುಜಾರಿ ಅವರೂ ಬಿದ್ದು ಸಮುದ್ರಪಾಲಾಗಿದ್ದಾರೆ. ಡಾ.ಪ್ರದೀಶ್ ಸಣ್ಣ ಕಲ್ಲು ಹಿಡಿದು ಸಮುದ್ರದಿಂದ ಪಾರಾಗಿದ್ದಾರೆ.
ತಡರಾತ್ರಿವರೆಗೂ ಅಗ್ಮಿಶಾಮಕ ದಳ, ಉಳ್ಳಾಲ ಪೊಲೀಸ್ ಠಾಣೆಯ ಪೊಲೀಸರು ಸ್ಥಳೀಯ ಈಜುಗಾರರ ಸಹಾಯದೊಂದಿಗೆ ರಕ್ಷಣಾ ಕಾರ್ಯಾಚರಣೆ ನಡೆಸಿದರೂ ಪ್ರಯೋಜನವಾಗಲಿಲ್ಲ. ಇಂದು ಅಲ್ಲೇ ಸಮುದ್ರ ತೀರದಲ್ಲಿ ಡಾ.ಆಶೀಖ್ ಮೃತದೇಹ ಪತ್ತೆಯಾಗಿದೆ.
![](https://i0.wp.com/nesaranewsworld.com/wp-content/uploads/2023/09/WhatsApp-Image-2023-08-11-at-12.41.54.jpg?resize=682%2C1024&ssl=1)
![](https://i0.wp.com/nesaranewsworld.com/wp-content/uploads/2023/08/WhatsApp-Image-2023-07-19-at-17.13.19.jpg?resize=700%2C1007&ssl=1)
![](https://i0.wp.com/nesaranewsworld.com/wp-content/uploads/2023/08/WhatsApp-Image-2023-06-19-at-2.49.48-PM.jpeg?resize=700%2C992&ssl=1)
![](https://i0.wp.com/nesaranewsworld.com/wp-content/uploads/2023/08/WhatsApp-Image-2023-08-01-at-17.48.59-1.jpg?resize=706%2C675&ssl=1)