ಬಸ್​​ ಕಂಡಕ್ಟರ್​ ಜಯರಾಜ್ ಪ್ರಾಮಾಣಿಕತೆಗೆ ಜನ ಮೆಚ್ಚುಗೆ: ವ್ಯಾನಿಟ್​​ ಬ್ಯಾಗ್​​ ಮಹಿಳೆಗೆ ವಾಪಸ್

ಶೇರ್ ಮಾಡಿ

ಅವಸರದಲ್ಲಿ ಬಿಟ್ಟು ಹೋಗಿದ್ದ 50 ಸಾವಿರ ಮೌಲ್ಯದ ವಸ್ತುಗಳಿದ್ದ ಬ್ಯಾಗ್​​ಅನ್ನು ಮಾಲಿಕರಿಗೆ ವಾಪಸ್​ ನೀಡಿವ ಮೂಲಕ ಕಂಡಕ್ಟರ್ ಪ್ರಾಮಾಣಿಕತೆ ಮರೆದಿದ್ದಾರೆ. ಉಡುಪಿಯಿಂದ ಮಂಗಳೂರಿಗೆ ತೆರಳುತ್ತಿದ್ದ (ಕೆಎ 20 ಎಎ 8296) ಬಸ್​​ನಲ್ಲಿ ಮಹಿಳೆಯೊಬ್ಬರು ಅವಸರದಲ್ಲಿ ವ್ಯಾನಿಟಿ ಬ್ಯಾಗ್ ಬಿಟ್ಟು ಹೋಗಿದ್ದರು. ವ್ಯಾನಿಟಿ ಬ್ಯಾಗ್​ನಲ್ಲಿ 50,000 ರೂ ಮೌಲ್ಯದ ವಸ್ತುಗಳಿದ್ದವು.

ಈ ಬ್ಯಾಗ್​ಅನ್ನು ಕಂಡೆಕ್ಟರ್​ ಪಾಂಡೇಶ್ವರ ಪೊಲೀಸ್ ಠಾಣೆಗೆ ಒಪ್ಪಿಸಿದ್ದರು. ಸೋಮವಾರ (ನವೆಂಬರ್ 20) ರಂದು ಪಾಂಡೇಶ್ವರ ಪೊಲೀಸ್ ಠಾಣೆ ಎಎಸ್ಐ ಶ್ರೀಧರ್ ಅವರು ವ್ಯಾನಿಟ್​​ ಬ್ಯಾಗ್ ಮಾಲಿಕರನ್ನು ಕರೆಸಿದ್ದಾರೆ. ನಂತರ ​​ಕಂಡಕ್ಟರ್ ಜಯರಾಜ್ ಕೂಡ ಠಾಣೆಗೆ ಆಗಮಿಸಿದರು. ಈ ವೇಳೆ ಎಎಸ್ಐ ಸಮ್ಮುಖದಲ್ಲಿ ಕಂಡಕ್ಟರ್​​ ಜಯರಾಜ್, ಮಹಿಳೆಗೆ ವ್ಯಾನಿಟಿ ಬ್ಯಾಗ್ ಅನ್ನು ಹಿಂತಿರುಗಿಸಿದರು.

ಕಂಡೆಕ್ಟರ್​​ ಜಯರಾಜ್ ಅವರ ಪ್ರಾಮಾಣಿಕತೆ ಸ್ಪೂರ್ತಿದಾಯಕವಾಗಿದೆ. ಕಂಡಕ್ಟರ್​​ ಜಯರಾಜ್​ ಅವರ ಪ್ರಾಮಾಣಿಕತೆಗೆ ಶ್ಲಾಘನೆ ವ್ಯಕ್ತವಾಗಿದೆ.

Leave a Reply

error: Content is protected !!