![](https://i0.wp.com/nesaranewsworld.com/wp-content/uploads/2023/11/IMG-20231123-WA0023-3.jpg?resize=1024%2C456&ssl=1)
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ ಕೆಯ್ಯೂರಿನ ಕರ್ನಾಟಕ ಪಬ್ಲಿಕ್ ಸ್ಕೂಲ್ನ ಸಹಯೋಗದಲ್ಲಿ ನಡೆದ ಪುತ್ತೂರು ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕಲಾಸಂಗಮ-2023 ರಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಹಿರಿಯ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳ ತಂಡ ಪ್ರಥಮ ಸಮಗ್ರ ಪ್ರಶಸ್ತಿ ಮತ್ತು ಕಿರಿಯ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳ ತಂಡ ದ್ವಿತೀಯ ಸಮಗ್ರ ಪ್ರಶಸ್ತಿ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಕಿರಿಯ ಪ್ರಾಥಮಿಕ ವಿಭಾಗದಲ್ಲಿ 4ನೇ ತರಗತಿಯ ಆರಾಧ್ಯಕೃಷ್ಣ(ಕೃಷ್ಣಪ್ರಸಾದ್ ಬೆಟ್ಟಂಪಾಡಿ ಮತ್ತು ಶ್ರೀಮತಿ ಶ್ರೀವಿದ್ಯಾ ದಂಪತಿ ಪುತ್ರಿ) ಕಥೆ ಹೇಳುವುದು –ಪ್ರಥಮಸ್ಥಾನ ಮತ್ತು 4ನೇ ತರಗತಿಯ ಅದ್ವಿತ್ ರಾವ್(ಕಾವು ರಮೇಶ್.ರಾವ್.ಟಿ ಮತ್ತು ಶ್ರೀಮತಿ ಶಿಲ್ಪಾ ರಾವ್ ದಂಪತಿ ಪುತ್ರ) ಆಶುಭಾಷಣದಲ್ಲಿ ದ್ವಿತೀಯ ಸ್ಥಾನ ಪಡೆದು, ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ.
ಹಿರಿಯ ಪ್ರಾಥಮಿಕ ವಿಭಾಗದಲ್ಲಿ 7ನೇ ತರಗತಿಯ ದೀಪ್ತಿ ಕುಬಣೂರಾಯ (ಪರ್ಲಡ್ಕ ಶ್ರೀ ಸುಧಾಕರ ಕುಬಣೂರಾಯ ಮತ್ತು ಶ್ರೀಮತಿ ಸವಿತಾ ಕುಬಣೂರಾಯ ದಂಪತಿ ಪುತ್ರಿ) ಹಿಂದಿ ಕಂಠಪಾಠದಲ್ಲಿ ಪ್ರಥಮ ಸ್ಥಾನ, 7ನೇ ತರಗತಿಯ ನಾಗಾಭೂಷಣ ಕಿಣಿ(ಕೆಮ್ಮಾಯಿ ನಾಗರಾಜ್ ಕಿಣಿ ಮತ್ತು ನಮೃತ ಕಿಣಿ ದಂಪತಿ ಪುತ್ರ) ಸಂಸ್ಕೃತ ಧಾರ್ಮಿಕ ಪಠಣದಲ್ಲಿ ಪ್ರಥಮ ಸ್ಥಾನ, 7ನೇ ತರಗತಿಯ ಸಿರಿ ಹಿಳ್ಳೆಮನೆ (ಹಿಂಗಾರು, ಪಂಜಳ ಶ್ರೀ ಶಿವಕುಮಾರ ಹಿಳ್ಳೆಮನೆ ಮತ್ತು ಡಾ.ಸಹನಾ ಹಿಳ್ಳೆಮನೆ ದಂಪತಿ ಪುತ್ರಿ) ಭಕ್ತಿಗೀತೆಯಲ್ಲಿ ಪ್ರಥಮ ಸ್ಥಾನ, 7ನೇ ತರಗತಿಯ ಅವನಿ.ಎಸ್.ವಿ(ಸಂಪ್ಯ ವಿಘ್ನೇಶ್ವರ ಭಟ್.ಎಸ್ ಮತ್ತು ಶ್ರೀಮತಿ ಸುಪರ್ಣಾ.ಕೆ ದಂಪತಿ ಪುತ್ರಿ) ಲಘು ಸಂಗೀತದಲ್ಲಿ ಪ್ರಥಮ ಸ್ಥಾನ ಪಡೆದು, ಪ್ರಥಮ ಸಮಗ್ರ ಪ್ರಶಸ್ತಿಯೊಂದಿಗೆ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ ಎಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
![](https://i0.wp.com/nesaranewsworld.com/wp-content/uploads/2023/11/WhatsApp-Image-2023-11-09-at-12.16.18-PM-3.jpeg?resize=724%2C1024&ssl=1)
![](https://i0.wp.com/nesaranewsworld.com/wp-content/uploads/2023/11/WhatsApp-Image-2023-09-29-at-10.07.05-1.jpg?resize=724%2C1024&ssl=1)
![](https://i0.wp.com/nesaranewsworld.com/wp-content/uploads/2023/09/WhatsApp-Image-2023-06-19-at-2.49.48-PM-1.jpeg?resize=723%2C1024&ssl=1)