ಶಿಶಿಲ ತಾಯಿ ಮಗಳ ಮೇಲೆ ಮಾರಣಾ0ತಿಕ ಹಲ್ಲೆ ಪ್ರಕರಣ ಆರೋಪಿಗೆ ಕಠಿಣ ಶಿಕ್ಷೆ ಆಗುವಂತೆ ಶ್ರೀ ಮತ್ಸ್ಯ ಶಿವ ದುರ್ಗಾ ಮಹಿಳಾ ಭಜನಾ ಮಂಡಳಿಯಿಂದ ಸರಕಾರಕ್ಕೆ ಮನವಿ

ಶೇರ್ ಮಾಡಿ

ಶಿಶಿಲ ಗ್ರಾಮದ ಕೋಟೆ ಬಾಗಿಲು ಸುರೇಶ್ ಗೌಡ ಎಂಬಾತ ತನ್ನ ಪತ್ನಿ ಮೋಹಿನಿ ಮತ್ತು ಮಗಳಾದ ಕು.ಪೂಜಾ ರ ಮೇಲೆ ಮಾರಾಣಾ0ತಿಕ ಹಲ್ಲೆ ನಡೆಸಿರುವುದನ್ನು ತೀವ್ರವಾಗಿ ಖಂಡಿಸಿ ಆರೋಪಿಗೆ ಕಠಿಣ ಶಿಕ್ಷೆ ಆಗುವಂತೆ ಮತ್ತು ಆರೋಪಿಗೆ ಗ್ರಾಮಸ್ಥರು ಯಾರೂ ಕೂಡ ಸಹಕಾರ ಮಾಡದಂತೆ ಆಗ್ರಹಿಸಿ ಶ್ರೀ ಮತ್ಸ್ಯ ಶಿವ ದುರ್ಗಾ ಭಜನಾ ಮಂಡಳಿಯ ವತಿಯಿಂದ ಶಿಶಿಲ ಗ್ರಾ.ಪಂ ಅಧ್ಯಕ್ಷರು ಮತ್ತು ಅಭಿವೃದ್ದಿ ಅಧಿಕಾರಿಯವರ ಮೂಲಕ ಮನವಿ ಸಲ್ಲಿಸಲಾಯಿತು.

ಈ ಸಂಧರ್ಭದಲ್ಲಿ ಭಜನಾ ಮಂಡಳಿಯ ಪದಾಧಿಕಾರಿಗಳು ಮತ್ತು ಎಲ್ಲ ಸದಸ್ಯರು ಉಪಸ್ಥಿತರಿದ್ದರು.

Leave a Reply

error: Content is protected !!