ಬಲ್ಯ ಶ್ರೀ ಉಮಾಮಹೇಶ್ವರಿ ದೇವಸ್ಥಾನ- ತಾರಕಮಂತ್ರ, ಭಜನೆ, ಕರಸೇವಕರಿಗೆ ಗೌರವಾರ್ಪಣೆ

ಶೇರ್ ಮಾಡಿ

ಬಲ್ಯ: ಅಯೋಧ್ಯೆಯ ಶ್ರೀ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯ ಅಂಗವಾಗಿ ಬಲ್ಯ ಶ್ರೀ ಉಮಾಮಹೇಶ್ವರಿ ದೇವಸ್ಥಾನದಲ್ಲಿ ಬೆಳಿಗ್ಗೆ ಶ್ರೀ ಉಮಾಮಹೇಶ್ವರಿ ಮಹಿಳಾ ಭಜನಾ ಮಂಡಳಿ ಹಾಗೂ ಶ್ರೀ ಉಮಾಮಹೇಶ್ವರಿ ಭಜನಾ ಮಂಡಳಿ ಶ್ರೀ ಕ್ಷೇತ್ರ ಬಲ್ಯ ಇವರಿಂದ ಭಜನಾ ಕಾರ್ಯಕ್ರಮ, ಪ್ರಾಣ ಪ್ರತಿಷ್ಟೇಯ ನೇರ ಪ್ರಸಾರ, 108 ಬಾರಿ ಶ್ರೀರಾಮ ತಾರಕಮಂತ್ರ, ದೇವರಿಗೆ ಮಹಾಪೂಜೆ, ಭಜನೆ ಮಂಗಳ, ಪ್ರಸಾದ ವಿತರಣೆ ಬಳಿಕ ಅನ್ನ ಸಂತರ್ಪಣೆ ನಡೆಯಿತು.

ಗೌರವಾರ್ಪಣೆ:
ಅಯೋದ್ಯೆ ಶ್ರೀ ರಾಮಚಂದ್ರ ದೇವರ ಪ್ರಾಣ ಪ್ರತಿಷ್ಠೆಯ ಕಾರ್ಯಕ್ರಮದ ನಿಮಿತ್ತ ವಿಶೇಷವಾಗಿ 1992ರಲ್ಲಿ ಅಯೋದ್ಯೆಗೆ ಕರಸೇವಕರಾಗಿ ಹೋಗಿ ಸೇವೆ ಸಲ್ಲಿಸಿದ ಡಾ.ಸುರೇಶ್ ಕುಮಾರ್ ಕೂಡೂರು ಹಾಗೂ ಪುರುಷೋತ್ತಮ ಗೌಡ ಪನ್ಯಾಡಿ ಇಬ್ಬರಿಗೆ ವಿಶೇಷವಾಗಿ ದೇವಸ್ಥಾನದ ವಿವಿಧ ಸಮಿತಿಗಳ ಆಶ್ರಯದಲ್ಲಿ, ಶ್ರೀ ರಾಮಭಕ್ತರ ವತಿಯಿಂದ ಶಾಲು ಹಾಕಿ ಫಲಪುಷ್ಪ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಶ್ರೀ ಉಮಾಮಹೇಶ್ವರಿ ಸೇವಾ ಟ್ರಸ್ಟಿನ ಅಧ್ಯಕ್ಷ ರಾಮಚರಣ್ ರೈ ಮಾಣಿಗ ಸಭೆಯ ಅಧ್ಯಕ್ಷತೆ ವಹಿಸಿದರು. ಟ್ರಸ್ಟಿನ ಕಾರ್ಯದರ್ಶಿ ನಾರಾಯಣ ಎನ್ ಕೊಲ್ಲಿಮಾರು, ಕೋಶಾಧಿಕಾರಿ ರಾಜರಾಮ್ ಭಟ್ ಹೊಸ್ಮಠ, ಉಪಾಧ್ಯಕ್ಷ ಶ್ರೀಮತಿ ದೇವಕಿ ಎಸ್, ಕೂಡೂರು ಟ್ರಸ್ಟಿನ ಸದಸ್ಯರಾದ ಸತೀಶಚಂದ್ರ ಶೆಟ್ಟಿ ಬೀರುಕ್ಕು, ತಿಮ್ಮಪ್ಪ ಕರ್ಕೇರ ಮತ್ರಾಡಿ, ಸರಸ್ವತಿ ಆರ್ ರೈ ಪಟ್ಟೆ, ಚಂದ್ರಹಾಸ ಜಿ ಗೋವಿಂದಕಟ್ಟೆ, ರಾಮಯ್ಯ ಗೌಡ ಬೈಲಾಡೈ, ಶಾಂತರಾಮ ರೈ ಬೆದ್ರಾಡಿ, ತನಿಯ ಸಂಪಡ್ಕ ಮತ್ತು ಧಾರ್ಮಿಕ ಉತ್ಸವ ಸಮಿತಿಯ ಅಧ್ಯಕ್ಷ ದೇವಯ್ಯ ಗೌಡ ಪನ್ಯಾಡಿ, ಉಪಾಧ್ಯಕ್ಷ ರಮೇಶ್ ಗೌಡ ನಾಲ್ಗುತ್ತು, ಕೋಶಾಧಿಕಾರಿ ಚಂದ್ರಹಾಸ ಶೆಟ್ಟಿ ಗುಂಡಿಜಾಲು, ಜತೆ ಕಾರ್ಯದರ್ಶಿ ಅಜೇಶ್ ಗೋವಿಂದಕಟ್ಟ ಹಾಗೂ ಉತ್ಸವ ಸಮಿತಿಯ ಹಲವು ಸದಸ್ಯರು, ಗೌರವ ಸಲಹೆಗಾರ ಧನಂಜಯ ಗೌಡ ಕೊಡಂಗೆ, ಬಿ.ಎಂ.ಪೂರ್ಣೇಶ್ ಗೌಡ ಬಾಬ್ಲುಬೆಟ್ಟು, ಜಗನ್ನಾಥ ಶೆಟ್ಟಿ ಗುಂಡಿಜಾಲು, ಭಜನಾ ಮಂಡಳಿಯ ಅಧ್ಯಕ್ಷ ರಾಧಾಕೃಷ್ಣ ರೈ ನಾಲ್ಗುತ್ತು, ಸದಸ್ಯರು, ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಹಲವು ಸದಸ್ಯರು, ದೇವಸ್ಥಾನದ ಬೈಲುವಾರು ಪ್ರತಿನಿಧಿಗಳು, ದೇವಸ್ಥಾನದ ಪ್ರಧಾನ ಅರ್ಚಕರಾದ ರವಿಪ್ರಸಾದ್ ಭಟ್ ಮತ್ತು ಶ್ರೀರಾಮಭಕ್ತರ ಸಂಘಟನೆ, ಭಜರಂಗದಳ, ವಿಶ್ವ ಹಿಂದೂ ಪರಿಷತ್, ಹಲವು ಹಿಂದೂಪರ ಸಂಘಟನೆಗಳ ಪ್ರಮುಖರು, ಸುಮಾರು 500 ಕ್ಕಿಂತಲೂ ಹೆಚ್ಚು ಶ್ರೀರಾಮಭಕ್ತರ ಸಮೂಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ದೇವಸ್ಥಾನದ ಕಾರ್ಯದರ್ಶಿ ನಾರಾಯಣ ಎನ್ ಕೊಲ್ಲಿಮಾರು ಕಾರ್ಯಕ್ರಮ ನಿರೂಪಿಸಿದರು.

Leave a Reply

error: Content is protected !!