ಶ್ರೀ ಕ್ಷೇತ್ರ ದುರ್ಗಾಪರಮೇಶ್ವರಿ ದೇವಸ್ಥಾನ – ನವೀಕರಣ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ.

ಶೇರ್ ಮಾಡಿ

ನೇಸರ ಫೆ.7: ಬೆಳ್ತಂಗಡಿ ತಾಲೂಕು ರೆಖ್ಯ ಗ್ರಾಮದ ಕೋಲಾರು ಎಂಬಲ್ಲಿ ಶ್ರೀ ಕ್ಷೇತ್ರ ದುರ್ಗಾಪರಮೇಶ್ವರಿ ದೇವಸ್ಥಾನದ ನವೀಕರಣ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಫೆ.17 ರಿಂದ ಫೆ.20 ರವರೆಗೆ ನಡೆಯಲಿದ್ದು.ಆ ಪ್ರಯುಕ್ತ ಪರಮ ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಅಮೃತ ಹಸ್ತದಿಂದ ಇಂದು ಧರ್ಮಸ್ಥಳ ಬೀಡಿನಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಬೆಳ್ತಂಗಡಿ ಶಾಸಕ ಶ್ರೀ ಹರೀಶ್ ಪೂಂಜ,ಅನುವಂಶೀಯ ಮೊಕ್ತೇಸರ ರಾಮಯ್ಯ ಗೌಡ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮಂಜುನಾಥಗೌಡ ಕೈಕುರೆ,ಆಡಳಿತ ಸಮಿತಿಯ ಅಧ್ಯಕ್ಷ ಕುಶಾಲಪ್ಪ ಪಾಪಿನಮಂಡೆ, ದಾಮೋದರ ಗೌಡ ಕೊಳಚ್ಚವುಗುತ್ತು , ಟಿ.ಕೆ.ಸದಾಶಿವ ನೆಲ್ಯಾಡಿ,ಬಾಲಕೃಷ್ಣ ಗೌಡ ಒಕ್ಕಲಿಗ, ವಸಂತಗೌಡ ಗುಡ್ರಾದಿ,ಬೇಬಿ ಕಿರಣ್ ಎಂಜಿರ,ನಾರಾಯಣ ಗೌಡ ಉರ್ನಡ್ಕ ಮೊದಲಾದವರು ಉಪಸ್ಥಿತರಿದ್ದರು.

ಆಮಂತ್ರಣ ಪತ್ರಿಕೆ:

Leave a Reply

error: Content is protected !!