ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಬಾಜೆ – ವಿವೇಕ ಕೊಠಡಿಗಳ ಉದ್ಘಾಟನಾ ಸಮಾರಂಭ

ಶೇರ್ ಮಾಡಿ

ಶಿಬಾಜೆ: ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಬಾಜೆ ವಿವೇಕ ಕೊಠಡಿಗಳ ಉದ್ಘಾಟನಾ ಸಮಾರಂಭ ಜ.27 ರಂದು ನಡೆಯಿತು. ಪಂಚಾಯತ್ ಅಧ್ಯಕ್ಷರಾದ ರತ್ನ ರವರ ಅಧ್ಯಕ್ಷತೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್ ಕೊಠಡಿಗಳನ್ನು ರಿಬ್ಬನ್ ಕತ್ತರಿಸಿ ಹಾಗೂ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಶಾಲೆಗಳಿಗೆ ಉತ್ತಮ ಕೊಠಡಿ ಇನ್ನಿತರ ಮೂಲಭೂತ ಸೌಕರ್ಯ ಅಗತ್ಯ, ಹೆಚ್ಚು ಮಕ್ಕಳು ಈ ಶಾಲೆಗೆ ಬರುವಂತಾಗಲಿ ಎಂದು ಶುಭ ಹಾರೈಸಿದರು.

ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ ಮಾತನಾಡಿ ಸವಲತ್ತುಗಳು ಪೋಷಕರ ಮತ್ತು ಮಕ್ಕಳ ಸಂಬಂಧ ಯಾವ ರೀತಿ ಪ್ರೀತಿಯಿಂದ ಕೂಡಿರಬೇಕು ಎಂದು ತಿಳಿಸಿದರು. ಶಾಸಕರಾದ ಹರೀಶ್ ಪೂಂಜಾ ಮಾತನಾಡಿ ಪಂಚಾಯತ್ ನ ನಿಕಟಪೂರ್ವ ಅಧ್ಯಕ್ಷರಾದ ರತೀಶ್ ರವರ ನಿರಂತರ ಪರಿಶ್ರಮದಿಂದ ನನ್ನ ಬಳಿ ಹತ್ತು ಹಲವು ಬಾರಿ ಅನುದಾನ ನೀಡಬೇಕೆಂದು ಹಠ ಮಾಡಿ ಕೊನೆಗೆ ವಿವೇಕ ಕೊಠಡಿ ಯೋಜನೆ ಅಂದಿನ ಶಿಕ್ಷಣ ಸಚಿವರಾದ ಬಿ.ಸಿ ನಾಗೇಶ್ ರವರ ಸಹಾಯದಿಂದ ಮಂಜೂರು ಮಾಡಿಸಿದೆ ಅದರ ಫಲವಾಗಿ ಇಂದು ಉತ್ತಮ ಕೊಠಡಿ ನಿರ್ಮಾಣವಾಗಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಪಂಚಾಯತ್ ಉಪಾಧ್ಯಕ್ಷರಾದ ದಿನಕರ್ ಕುರುಪ್, ಸದಸ್ಯರಾದ ರತೀಶ್. ಬಿ, ಯಮುನಾ, ವಿನಯಚಂದ್ರ, ವನಿತಾ ವಿ ಶೆಟ್ಟಿಗಾರ್, ಪೆರ್ಲ ಕ್ಲಸ್ಟರ್ ಸಿ.ಆರ್.ಪಿ ವಿಲ್ಫ್ರೆಡ್ ಪಿಂಟೋ, ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಘವೇಂದ್ರ ನಾಯಕ್, ನೂಜಿಬಾಳ್ತಿಲ ಬೆಥನಿ ವಿಧ್ಯಾ ಸಂಸ್ಥೆಯ ಪ್ರಾಂಶುಪಾಲರಾದ ಜಾರ್ಜ್ ಟಿ, ಶಾಲಾ ಮುಖ್ಯೋಪಾಧ್ಯಾಯರಾದ ಭಿಮನಾಯ್ಕ.ಯು, ಎಸ್.ಡಿ.ಎಮ್.ಸಿ ಅಧ್ಯಕ್ಷ ಯೋಗೀಶ್ ಬೇಂಗಳ, ಹಳೇ ವಿಧ್ಯಾರ್ಥಿ ಸಂಘದ ಅಧ್ಯಕ್ಷ ಕೃಷ್ಣಪ್ಪ ಗೌಡ ಬೇಂಗಳ, ರಾಜು ಟಿ, ಪ್ರವೀಣ್ ಟಿ ಉಪಸ್ಥಿತರಿದ್ದರು. ವಿವೇಕ ಕೊಠಡಿ ನಿರ್ಮಾಣಕ್ಕೆ ಶ್ರಮಿಸಿದ ಶಾಸಕರನ್ನು, ಶಾಲೆಯಲ್ಲಿ ಶಿಕ್ಷರಾಗಿ ಸೇವೆ ಸಲ್ಲಿಸಿ ಶಾಲೆಯ ಅಭಿವೃದ್ಧಿಗೆ ಶ್ರಮಿಸಿ ಬೇರೆ ಕಡೆ ಕರ್ತವ್ಯ ನಿರ್ವಹಿಸುತ್ತಿರುವ ನಾಗೇಶ್, ಮಮತಾ, ನಾಗಮ್ಮ, ಶಾಂತಾ ರವರನ್ನೂ, ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಪ್ರಮಿತಾ, ಗೀತಾ, ಲೋಲಾಕ್ಷಿ, ದಿವ್ಯ, ಧನ್ಯಶ್ರಿ, ಸುಜಾತ, ಲೋಕೇಶ್, ರಶ್ಮಿ, ಯೋಗಿತಾ, ಭಾಗೀರತಿ, ಇಂದಿರಾ, ವಸಂತ್ ಹಾಗೆಯೇ ಶಾಲೆಗೆ ವಿವಿಧ ರೀತಿಯ ಕೊಡುಗೆ ನೀಡಿದ ರತೀಶ್.ಬಿ, ಸ್ಕರಿಯ, ಜಯರಾಂ ಪೂಜಾರಿ ರವರನ್ನು ಸನ್ಮಾನಿಸಲಾಯಿತು.

ವರ್ಷ ಮತ್ತು ತಂಡ ಪ್ರಾರ್ಥಿಸಿದರು, ಯೋಗೀಶ್ ಬೇಂಗಳ ಸ್ವಾಗತಿಸಿದರು, ಶಿಕ್ಷಕ ಭೀಮನಾಯ್ಕ ವಂದಿಸಿದರು, ಶಿಕ್ಷಕ ರೊನಾಲ್ಡೋ ನಿರೂಪಿಸಿದರು.

Leave a Reply

error: Content is protected !!