ಕೊಕ್ಕಡ: ರಿಕ್ಷಾ ಚಾಲಕ ಚಂದ್ರಶೇಖರ್ ನೇಣುಬಿಗಿದು ಆತ್ಮಹತ್ಯೆ

ಶೇರ್ ಮಾಡಿ

ಕೊಕ್ಕಡ: ಇಲ್ಲಿಯ ಆಲಂಬಿಲ ಬಳಿಯ ಬಲಿಪಗುಡ್ಡೆ ನಿವಾಸಿ ರಿಕ್ಷಾ ಚಾಲಕ ಚಂದ್ರಶೇಖರ್(40ವ)ರವರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೇ 11ರಂದು ಮಧ್ಯಾಹ್ನ ನಡೆದಿದೆ.

ಇವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ 12 ವರ್ಷಗಳ ಕಾಲ ವಿವಿಧ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ್ದು ನಂತರ ಕೆಲಸ ಬಿಟ್ಟು ರಿಕ್ಷಾ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಮೃತರು ತಾಯಿ, ಪತ್ನಿ, ಒಂದು ಗಂಡು, ಒಂದು ಹೆಣ್ಣು, ಮೂವರು ಸಹೋದರಿಯರು ಅಗಲಿದ್ದಾರೆ.

Leave a Reply

error: Content is protected !!