ನೆಲ್ಯಾಡಿ ಪ್ರಾ.ಕೃ.ಪ.ಸಹಕಾರಿ ಸಂಘಕ್ಕೆ ಆರ್ಥಿಕ ವರ್ಷದಲ್ಲಿ 1.52 ಕೋಟಿ ರೂ.ನಿವ್ವಳ ಲಾಭ

ಶೇರ್ ಮಾಡಿ

ನೆಲ್ಯಾಡಿ: 64 ವರ್ಷಗಳ ಇತಿಹಾಸ ಹೊಂದಿದ ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು 2023-24ನೇ ಆರ್ಥಿಕ ವರ್ಷದಲ್ಲಿ ವಿಶೇಷ ಸಾಧನೆ ಮಾಡಿದೆ. ಆಡಿಟ್ ಪೂರ್ವ ಅಂಕಿ ಅಂಶಗಳ ಪ್ರಕಾರ ವರ್ಷಾಂತ್ಯಕ್ಕೆ 480.80 ಕೋಟಿ ರೂ.ವಾರ್ಷಿಕ ವ್ಯವಹಾರವನ್ನು ಮಾಡಿ 1.52 ಕೋಟಿ ರೂ.ನಿವ್ವಳ ಲಾಭಗಳಿಸಿದೆ. 23 ವರ್ಷಗಳ ಬಳಿಕ ಪ್ರಥಮ ಬಾರಿಗೆ ಶೇ.100 ಸಾಲ ವಸೂಲಾತಿ ಮಾಡಿ ದಾಖಲೆ ಮಾಡಿದೆ ಎಂದು ಸಂಘದ ಅಧ್ಯಕ್ಷ ಉಮೇಶ್ ಶೆಟ್ಟಿ ಪಟ್ಟೆ ತಿಳಿಸಿದ್ದಾರೆ.

ಅವರು ಸಂಘದ ಸಭಾಂಗಣದಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ 2023-24ನೇ ವಾರ್ಷಿಕ ವ್ಯವಹಾರವನ್ನು ವಿವರಿಸಿ ಮಾತನಾಡಿದರು.

ಸಂಘವು ನೆಲ್ಯಾಡಿ, ಕೌಕ್ರಾಡಿ, ಇಚ್ಲಂಪಾಡಿ, ಶಿರಾಡಿ, ಆಲಂತಾಯ, ಗೋಳಿತ್ತೊಟ್ಟು, ಕೊಣಾಲು ಕಂದಾಯ ಗ್ರಾಮಗಳನ್ನು ಒಳಗೊಂಡಿದ್ದು. ಸಂಘವು ವರ್ಷದಿಂದ ವರ್ಷಕ್ಕೆ ಪ್ರಗತಿಯನ್ನು ಕಾಣುತ್ತಿದೆ. 2023-24ನೇ ಸಾಲಿನಲ್ಲಿ ವ್ಯವಹಾರದಲ್ಲಿ ಗಣನೀಯ ಸಾಧನೆಯನ್ನು ಮಾಡಿದೆ. ವರ್ಷಾಂತ್ಯಕ್ಕೆ 30 ಕೋಟಿ ರೂ.ಠೇವಣಿ ಹೊಂದಿದೆ. 80 ಕೋಟಿ ರೂ.ಸದಸ್ಯರ ಸಾಲ, 106 ಕೋಟಿ ರೂ.ದುಡಿಯುವ ಬಂಡವಾಳವಿದೆ. ಸಂಘದಲ್ಲಿ ಒಟ್ಟು 6259 ಸದಸ್ಯರಿದ್ದಾರೆ. ಆಡಳಿತ ಮಂಡಳಿ ನಿರ್ದೇಶಕರ ಹಾಗೂ ಸಂಘದ ಸದಸ್ಯರ ಸಹಕಾರದೊಂದಿಗೆ ಸಂಘವು ಪ್ರತಿ ವರ್ಷ ಪ್ರಗತಿ ಕಾಣುತ್ತಿದೆ ಎಂದು ಉಮೇಶ್ ಶೆಟ್ಟಿ ಪಟ್ಟೆ ಹೇಳಿದರು.

ಸಂಘದ ಉಪಾಧ್ಯಕ್ಷ ಕಮಲಾಕ್ಷ, ನಿರ್ದೇಶಕರಾದ ಜಯಾನಂದ ಬಂಟ್ರಿಯಾಲ್, ಸರ್ವೋತ್ತಮ ಗೌಡ, ಬಾಲಕೃಷ್ಣ ಬಾಣಜಾಲು, ಸುದರ್ಶನ್, ಪ್ರಶಾಂತ ರೈ, ಉಷಾ ಅಂಚನ್, ಸುಮಿತ್ರ, ಸುಲೋಚನಾ, ಅಣ್ಣು ಬಿ., ಗುರುರಾಜ್ ಭಟ್, ಕೇಂದ್ರ ಸಹಕಾರಿ ಬ್ಯಾಂಕ್‌ನ ವಲಯ ಮೇಲ್ವಿಚಾರಕ ವಸಂತ ಹಾಗೂ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಕರ.ರೈ ಉಪಸ್ಥಿತರಿದ್ದರು.

Leave a Reply

error: Content is protected !!