ಕೇರಳದ ಅನಂತ ಪದ್ಮನಾಭಸ್ವಾಮಿ ದೇವಸ್ಥಾನದ ಪ್ರಮುಖ ಅರ್ಚಕರಾಗಿ ಕೊಕ್ಕಡದ ಸತ್ಯನಾರಾಯಣ

ಶೇರ್ ಮಾಡಿ

ಕೊಕ್ಕಡ: ಕೇರಳ -ತಿರುವನಂತಪುರಂದ ಪ್ರಸಿದ್ಧ ಅನಂತ ಪದ್ಮನಾಭಸ್ವಾಮಿ ದೇವಸ್ಥಾನದ ಪ್ರಮುಖ ಅರ್ಚಕರಾಗಿ ದಕ್ಷಿಣ ಕನ್ನಡ ಮೂಲದ ಸತ್ಯನಾರಾಯಣ ನೇಮಕಗೊಂಡಿದ್ದಾರೆ.

ಕೊಕ್ಕಡ ಸಮೀಪದ ಅಡೈ ಬಡೆಕ್ಕರ ನಿವಾಸಿ ದಿ.ಸುಬ್ರಾಯ ತೋಡ್ತಿಲ್ಲಾಯ ಮತ್ತು ಯಶೋಧ ದಂಪತಿಗಳ ದ್ವಿತೀಯ ಪುತ್ರ ಸತ್ಯನಾರಾಯಣ.

ಇವರು ಪ್ರಾಥಮಿಕ, ಪ್ರೌಢ ವಿದ್ಯಾಭ್ಯಾಸವನ್ನು ಕೊಕ್ಕಡದಲ್ಲಿ, ನೆಲ್ಯಾಡಿಯ ಸೈಂಟ್ ಜಾರ್ಜ್ ಪದವಿಪೂರ್ವ ಕಾಲೇಜಿನಲ್ಲಿ ಪೂರೈಸಿದ್ದಾರೆ. ಇವರು ಪೌರೋಹಿತ್ಯವನ್ನು ಪಾಲಲೆ ದಿ.ಸತೀಶ್ ಎಡಪಡಿತ್ತಾಯರವರಲ್ಲಿ ಪೂರೈಸಿದ್ದಾರೆ.

ಶ್ರೀಅನಂತಪದ್ಮನಾಭ ಸ್ವಾಮಿಯ ದೇವಸ್ಥಾನದಲ್ಲಿ ಹಿಂದಿನಿಂದಲೂ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸುವ ಹಕ್ಕು ಕೊಕ್ಕಡದ 8 ಕುಟುಂಬಗಳಿಗೆ ಇದೆ.

Leave a Reply

error: Content is protected !!