ತಿರುವನಂತಪುರ ಯಾತ್ರೆ ಕೈಗೊಂಡ ಕೊಕ್ಕಡದ 46 ಭಕ್ತರು

ಶೇರ್ ಮಾಡಿ

ಕೊಕ್ಕಡ: ದೇಶದ ಶ್ರೀಮಂತ ದೇವಾಲಯಗಳಲ್ಲಿ ಒಂದಾದ ತಿರುವನಂತಪುರದ ಶ್ರೀ ಅನಂತ ಪದ್ಮನಾಭ ದೇವಾಲಯಕ್ಕೆ ಕೊಕ್ಕಡದ 46 ಮಂದಿ ಭಕ್ತರು ಶನಿವಾರ ಭೇಟಿ ಮಾಡಿ ಶ್ರೀ ದೇವರ ದರ್ಶನ ಪಡೆದರು.

ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕರಾದ ಕೊಕ್ಕಡ ಮೂಲದ ಸತ್ಯನಾರಾಯಣ(ನಾಗೇಶ) ತೋಡ್ತಿಲ್ಲಾಯ ಅರನ್ನು ಭೇಟಿ ಮಾಡಿ ಶ್ರೀ ದೇವರ ಪ್ರಸಾದ ಪಡೆದರು.

ಯಾತ್ರೆಯ ನೇತೃತ್ವವನ್ನು ಕೊಕ್ಕಡ ಮಧುರ ಜ್ಯೂಸ್ ಸೆಂಟರ್ ಮಾಲಕ ಸಾಂತಪ್ಪ ಮಡಿವಾಳ ಮಲ್ಲಿಗೆಮಜಲು, ಗಣೇಶ್ ಎಲೆಕ್ಟ್ರಿಕಲ್ಸ್ ನ ಗಣೇಶ್ ಹಾಗೂ ಲಕ್ಷ್ಮಿ ಎಲೆಕ್ಟ್ರಿಕಲ್ಸ್ ನ ಪುರುಷೋತ್ತಮ.ಕೆ ವಹಿಸಿದ್ದರು

Leave a Reply

error: Content is protected !!