ಹೆಬ್ಬಾವಿನ ಮರಿ ಎಂದು ಬರಿಗೈಯಲ್ಲಿ ಹಾವು ಹಿಡಿದ ವ್ಯಕ್ತಿ ಸಾವು

ಶೇರ್ ಮಾಡಿ

ಬಜಪೆ: ಕೆಲಸಕ್ಕಿದ್ದ ಮನೆಯಲ್ಲಿ ಮನೆಯೊಳಗೆ ಬಂದಿದ್ದ ಕನ್ನಡಿ ಹಾವಿನ ಮರಿಯನ್ನು ಬರಿಗೈಯಲ್ಲಿ ಹಿಡಿಯಲು ಮುಂದಾದ ವೇಳೆ ವ್ಯಕ್ತಿಯ ಕೈಗೆ ಹಾವು ಕಚ್ಚಿ ಮೃತಪಟ್ಟ ಘಟನೆ ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಮರವೂರು ಎಂಬಲ್ಲಿ ನಡೆದಿದೆ.

ಮೃತ ವ್ಯಕ್ತಿ ರಾಮಚಂದ್ರ ಪೂಜಾರಿ (55) ಬಂಟ್ವಾಳ ತಾಲೂಕು ಕುರಿಯಾಳದವರಾಗಿದ್ದು ಮರವೂರಿನ ಮನೆಯೊಂದರಲ್ಲಿ ಹಲವು ವರ್ಷಗಳಿಂದ ಮನೆ ಕೆಲಸಕ್ಕಿದ್ದರು. ಸೆ.4ರಂದು ಮಧ್ಯಾಹ್ನದ ವೇಳೆ ಕನ್ನಡಿ ಹಾವಿನ ಮರಿಯೊಂದು ಮನೆಯೊಳಗೆ ಬಂದಾಗ ಬರಿಗೈಯಲ್ಲಿ ಅದನ್ನು ಹಿಡಿಯಲು ಮುಂದಾಗಿದ್ದು ಹಾವಿನ ಮರಿ ರಾಮಚಂದ್ರ ಪೂಜಾರಿ ಅವರ ಕೈಗೆ ಕಚ್ಚಿದ್ದು ಮತ್ತೆ ಹಿಡಿಯಲು ಮುಂದಾದಾಗ ಮತ್ತೆ ಹಾವು ಕಚ್ಚಿದೆ ಎನ್ನಲಾಗಿದೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸದೆ ರಾಮಚಂದ್ರ ಪೂಜಾರಿ ಅವರು ಯಾವುದೇ ಚಿಕಿತ್ಸೆ ಪಡೆದಿರಲಿಲ್ಲ. ಸಂಜೆಯ ವೇಳೆಗೆ ವಿಷವೇರಿ ತಲೆತಿರುಗಲು ಪ್ರಾರಂಭಗೊಂಡಾಗ ಅವರು ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದು ಸೆ.9ರಂದು ಅವರು ಮೃತಪಟ್ಟಿರುತ್ತಾರೆ. ಈ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.

Leave a Reply

error: Content is protected !!