ಪೆರಾಬೆ: ಅಗ್ನಿ ಅವಘಡಕ್ಕೆ ತುತ್ತಾದ ಅಬ್ದುಲ್ ಸಿದ್ದಿಕ್ ರ ಬಡ ಕುಟುಂಬಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳದಿಂದ ಪ್ರಾಥಮಿಕ ವಸ್ತು ವಿತರಣೆ

ಶೇರ್ ಮಾಡಿ

ನೇಸರ ಫೆ.28: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಂತೂರು ಪೆರಾಬೆ ಎಂಬಲ್ಲಿ,ಅಗ್ನಿ ಅವಘಡಕ್ಕೆ ತುತ್ತಾದ ಅಬ್ದುಲ್ ಸಿದ್ದಿಕ್ ರವರ ಬಡ ಕುಟುಂಬ ಸಂದರ್ಶಿಸಿ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಪ್ರಾಥಮಿಕ ವಸ್ತು ವಿತರಣೆ ಮಾಡಲಾಯಿತು.

ಹೆಚ್ಚಿನ ಮಾಹಿತಿಗಾಗಿ : https://nesaranewsworld.com/07-02-22-archives-213/

ಈ ಸಂದರ್ಭದಲ್ಲಿ ಪ್ರಾದೇಶಿಕ ನಿರ್ದೇಶಕರು ಗ್ರಾಮಾಭಿವೃದ್ಧಿ ವಿಮಾ ಯೋಜನೆಯ ಜಯರಾಮ ನೆಲ್ಲಿತ್ತಾಯ,ಮಹಿಳಾ ಜ್ಞಾನ ವಿಕಾಸ ನಿರ್ದೇಶಕರು ವಿಠ್ಠಲ್ ಪೂಜಾರಿ, ತಾಲೂಕು ಯೋಜನಾಧಿಕಾರಿ ಮೇದಪ್ಪ.ಎನ್,ತಾಲೂಕು ಜ್ಞಾನವಿಕಾಸ ಸಮನ್ವಯಾಧಿಕಾರಿ ಕುಮಾರಿ ಶಿಲ್ಪ,ಆಲಂಕಾರು ವಲಯ ಮೇಲ್ವಿಚಾರಕ ರಾದ ಕವಿತಾ,ರೇಖಾ,ಆಲಂಗಾರು ಒಕ್ಕೂಟದ ಅಧ್ಯಕ್ಷ ಬಾಲಕೃಷ್ಣ ಗೌಡ,ಆಲಂಕಾರು ವಲಯ ಜನಜಾಗೃತಿ ವೇದಿಕೆ ಅಧ್ಯಕ್ಷ ಇಂದುಶೇಖರ್ ಹಾಗೂ ಸ್ಥಳೀಯ ಗ್ರಾಮ ಪಂಚಾಯತಿನ ಸದಸ್ಯರು,ಮನೆಯವರು ಉಪಸ್ಥಿತರಿದ್ದರು.

 

–ಜಾಹೀರಾತು—

 

Leave a Reply

error: Content is protected !!