ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ನವೋದಯ ಸಂಘದ ಮಹಿಳೆಯರಿಗೆ ಸೀರೆ ವಿತರಣೆ

ಶೇರ್ ಮಾಡಿ

ಕೊಕ್ಕಡ : ಸಂಘದ ಮಹಿಳೆಯರಿಗೆ ಸೀಏ ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ನವೋದಯ ಸ್ವಸಹಾಯ ಸಂಘದ ಮಹಿಳಾ ಸದಸ್ಯರಿಗೆ ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಘವೇಂದ್ರ ನಾಯಕ್ ಬರ್ಗುಳ ರವರು ಸಮವಸ್ತ್ರವನ್ನು ಎ.25ರಂದು ವಿತರಿಸಿದರು.

ಈ ಸಂಧರ್ಭದಲ್ಲಿ ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ರವಿಚಂದ್ರ ರಾವ್ ಸಂಘದ ಉಪಾಧ್ಯಕ್ಷ ರಾಜು ಸಾಲಿಯಾನ್, ಸದಸ್ಯರಾದ ಧರ್ಮರಾಜ್ ಗೌಡ ಅಡ್ಕಾಡಿ,ಕೊರಗಪ್ಪ ಗೌಡ ಶಿಶಿಲ, ಬೇಬಿ ಕಿರಣ್, ವರದಶಂಕರ್ ದಾಮ್ಲೆ, ಕೃಷ್ಣಪ್ಪ ಗೌಡ,ನಾಗೇಶ್ ಜಿ, ಗಂಗಾವತಿ, ಬೇಬಿ, ನವೋದಯ ಸಂಘದ ಜಿಲ್ಲಾ ಮೇಲ್ವಿಚಾರಕ ರಂಜಿತ್ ಕುಮಾ‌ರ್, ತಾಲೂಕು ಮೇಲ್ವಿಚಾರಕ ಸ್ಟಾನಿ ಪಿಂಟೋ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮುಖ್ಯಕಾರ್ಯನಿರ್ವಹಣಾಧಿಕಾರಿ ರವಿಚಂದ್ರ ರಾವ್ ಸ್ವಾಗತಿಸಿ ಧನ್ಯವಾದವಿತ್ತರು. ಹತ್ಯಡ್ಕ ನವೋದಯ ಸ್ವಸಹಾಯ ಸಂಘದ ಪ್ರೇರಕರಾದ ಅಭಿಜಿತ್ ಸಹಕರಿಸಿದರು.

  •  

Leave a Reply

error: Content is protected !!