


ನೆಲ್ಯಾಡಿ: ನೆಲ್ಯಾಡಿಯ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ವಿಜೃಂಭಣೆಯ ಪವಿತ್ರ ಪರಮ ಪ್ರಸಾದ ಸ್ವೀಕರಣಾ ಕಾರ್ಯಕ್ರಮ ಭಕ್ತಿ ಪೂರ್ವಕವಾಗಿ ಜರುಗಿತು.
ಹತ್ತು ಮಂದಿಯ ಮಕ್ಕಳ ತಂಡ, ಹತ್ತು ದಿನಗಳ ಧಾರ್ಮಿಕ ತರಬೇತಿ ಮತ್ತು ಪ್ರಾರ್ಥನೆಗಳ ಮೂಲಕ ಈ ಪವಿತ್ರ ಕ್ಷಣಕ್ಕೆ ಸಿದ್ಧತೆ ಮಾಡಿಕೊಂಡು, ಪ್ರಥಮ ಬಾರಿಗೆ ಪರಮ ಪ್ರಸಾದ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಪುಣ್ಯ ಕ್ಷೇತ್ರದ ವಂ.ಫಾ. ಶಾಜಿ ಮಾತ್ಯು, ಫಾ.ಆಗಸ್ಟಿನ್ ಪೊಟ್ಟಮ್ ಕುಳಂಗರ, ಕಂಕನಾಡಿಯ ಫಾ.ಕುರಿಯಾಸ್, ಜಗದಲ್ಪುರ್ನ ಫಾ.ಶಾಜನ್ ಎಂಬ್ರಾಡಿ ವಯಲಿಲ್, ಮೈಸೂರಿನ ಫಾ.ಸೇಬಾಷ್ಟಿಯನ್ ಪುನ್ನತಾನಮ್,ಬೋಲ್ಮಿನಾರ್ನ ಫಾ. ಜಿಬಿನ್ ಮತ್ತು ಕೊಕ್ಕಡದ ಫಾ.ಅಲೆಕ್ಸ್ ಉಪಸ್ಥಿತರಿದ್ದರು.












