

ಬೆಳ್ಮಣ್: ಜೇಸಿಐ ಭಾರತ ವಲಯ 15ರ “ದುಂದುಬಿ” ಮದ್ಯಂತರ ಸಮ್ಮೇಳನ 2025, ಬೆಳ್ಮಣ್ ನ ಸನ್ಮಾನ್ ರೆಸಿಡೆನ್ಸಿಯಲ್ಲಿ ಜೇಸಿಐ ಬೆಳ್ಮಣ್ ಘಟಕದ ಆಶ್ರಯದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಜೇಸಿಐ ನೆಲ್ಯಾಡಿ ಘಟಕವು ತನ್ನ ಶ್ರೇಷ್ಠ ಸೇವಾ ಚಟುವಟಿಕೆಯಾಗಿ ಸಮ್ಮೇಳದಲ್ಲಿ ಹಲವಾರು ಮನ್ನಣೆಗಳನ್ನು ಪಡೆದುಕೊಂಡಿದೆ.
42 ವರ್ಷಗಳ ಪರಂಪರೆಯುಳ್ಳ ಪ್ರತಿಷ್ಠಿತ ಜೇಸಿಐ ನೆಲ್ಯಾಡಿ ಘಟಕವು ಈ ಬಾರಿ ಮದ್ಯಂತರ ಸಮ್ಮೇಳನದಲ್ಲಿ ಔಟ್ಸ್ಟ್ಯಾಂಡಿಂಗ್ ಲೋಕಲ್ ಆರ್ಗನೈಸೇಶನ್ ರನ್ನರ್ ಅವಾರ್ಡ್, ಡೈಮಂಡ್ ಘಟಕ ಪ್ರಶಸ್ತಿ, ಔಟ್ಸ್ಟ್ಯಾಂಡಿಂಗ್ ಪ್ರೆಸಿಡೆಂಟ್ ರನ್ನರ್ ಅವಾರ್ಡ್ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದೆ. ಘಟಕದ ಸದಸ್ಯರು ವಿಡಿಯೋ ಕಾನ್ಟೆಸ್ಟ್ ವಿಭಾಗದಲ್ಲೂ ಭಾಗವಹಿಸಿ ಬಹುಮಾನ ಪಡೆದು ಪ್ರಶಂಸೆಗಳಿಸಿದ್ದಾರೆ.
ಕಾರ್ಯಕ್ರಮದ ವೇಳೆ, ಜೇಸಿಐ ನೆಲ್ಯಾಡಿ ಘಟಕದ ಅಧ್ಯಕ್ಷ ಜೆ ಎಫ್ ಪಿ ಡಾ.ಸುಧಾಕರ್ ಶೆಟ್ಟಿ ಅವರು ಜೇಸಿಐ ವಿದ್ಯಾನಿಧಿಗಾಗಿ ದೇಣಿಗೆ ನೀಡಿದ ಕಾರಣಕ್ಕಾಗಿ ವಿದ್ಯಾಚೇತಕ್ ಪ್ರಶಸ್ತಿಯನ್ನು ಸ್ವೀಕರಿಸಿದರು. ಈಗಾಗಲೇ ಅವರು ವಲಯದ ಏಕೈಕ ಎಲೈಟ್ ಪ್ರೆಸಿಡೆಂಟ್ ಪ್ರಶಸ್ತಿಗೂ ಭಾಜನರಾಗಿರುವುದು ವಿಶೇಷ.
ಈ ಸಮ್ಮೇಳನದಲ್ಲಿ ಜೇಸಿಐ ವಲಯ ಅಧ್ಯಕ್ಷ ಅಭಿಲಾಷ್, ವಲಯ ಉಪಾಧ್ಯಕ್ಷ ಸಂತೋಷ್ ಶೆಟ್ಟಿ, ಜೇಸಿ ಪ್ರವೀಣಿ ಶೆಟ್ಟಿ, ಜೇಸಿ ಸುಚಿತ್ರ ಬಂಟ್ರಿಯಾಲ್, ಜೇಸಿ ದಯಾಕರ ರೈ, ಜೇಸಿ ಪುರಂದರ ಗೌಡ, ಜೇಸಿ ಜಾಹ್ನವಿ, ಜೇಸಿ ದಯಾನಂದ ಕೆ ಆದರ್ಶ, ಜೇಸಿ ಹರೀಶ್ ರೈ, ಹಾಗೂ ಆರಾಧ್ಯ ಶೆಟ್ಟಿ ಉಪಸ್ಥಿತರಿದರು.










