

ನೂಜಿಬಾಳ್ತಿಲ: ಬೆಥನಿ ವಿದ್ಯಾಸಂಸ್ಥೆಯಲ್ಲಿ ಜೂ.2ರಂದು ಪಾಲಕರ ಸಮಾವೇಶವನ್ನು ಆಯೋಜಿಸಲಾಗಿದ್ದು, ರೆ.ವ. ಸಿಸ್ಟರ್ ಬ್ಲೆಸ್ಸಿ ಅವರು ಭಾಗವಹಿಸಿ “ವಿದ್ಯಾರ್ಥಿಗಳ ಬೆಳವಣಿಗೆಯಲ್ಲಿ ಪಾಲಕರ ಪಾತ್ರ” ಎಂಬ ವಿಷಯದ ಬಗ್ಗೆ ಮಾತನಾಡಿದ ಅವರು, ಮಕ್ಕಳ ಮಾನಸಿಕ, ಬೌದ್ಧಿಕ ಹಾಗೂ ಶಾರೀರಿಕ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಅತ್ಯಂತ ಅಮೂಲ್ಯವಾಗಿದೆ, ಪೋಷಕರ ನಡೆ-ನುಡಿಯನ್ನು ಮಕ್ಕಳಿಗೆ ಮಾದರಿಯಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ನಿರ್ದೇಶಕರಾದ ಫಾ.ವಿಜೋಯ್ ವರ್ಗೀಸ್ ವಹಿಸಿ, ಶಿಸ್ತುಬದ್ಧ ಶಿಕ್ಷಣ ಹಾಗೂ ಸರ್ವತೋಮುಖ ಬೆಳವಣಿಗೆಗೆ ನೀಡಲಾಗುತ್ತಿರುವ ಆದ್ಯತೆ ಕುರಿತು ವಿವರಿಸಿದರು. ಪೋಷಕರ ಸಹಕಾರಕ್ಕೆ ಅವರು ವಿನಂತಿಸಿದರು.
ಇತಿಹಾಸ ಉಪನ್ಯಾಸಕರಾದ ವಿಶ್ವನಾಥ ಶೆಟ್ಟಿ ಅವರು ಭಾವಪೂರ್ಣವಾಗಿ ಹಾಡು ಹಾಡಿ ಸಭೆಗೆ ಸಂತೋಷದ ಸ್ಪರ್ಶ ನೀಡಿದರು. ಜೊತೆಗೆ ರಕ್ಷಕ-ಶಿಕ್ಷಕ ಸಂಘದ ನೂತನ ಪದಾಧಿಕಾರಿಗಳ ಚುನಾವಣೆ ನಡೆಯಿತು. ಅಧ್ಯಕ್ಷರಾಗಿ ಲಕ್ಷ್ಮಣ ಗೌಡ ಬಿಳಿನೆಲೆ ಹಾಗೂ ಉಪಾಧ್ಯಕ್ಷರಾಗಿ ಭಾರತಿ ಆಯ್ಕೆಯಾಗಿದ್ದು, ಅವರನ್ನು ಸಂಸ್ಥೆಯ ವತಿಯಿಂದ ಅಭಿನಂದಿಸಲಾಯಿತು.
ಸಂಸ್ಥೆಯ ಪ್ರಾಂಶುಪಾಲರಾದ ಜೋರ್ಜ್ ಟಿ.ಎಸ್, ಮುಖ್ಯ ಗುರುಗಳಾದ ಥಾಮಸ್ ಏ.ಕೆ, ಉಪನ್ಯಾಸಕ ವೃಂದ, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ, ಪಾಲಕರು, ವಿದ್ಯಾರ್ಥಿಗಳು ಹಾಗೂ ಹಿರಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸಂದರ್ಭದಲ್ಲಿ ಹತ್ತನೇ ತರಗತಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಕು.ರಕ್ಷಿತಾ, ಕು.ನಿಶ್ಮಿತಾ, ಕು.ಚೈತ್ರ, ಕು.ಲಾವಣ್ಯ ಹಾಗೂ ಕನ್ನಡ ವಿಷಯದಲ್ಲಿ ನೂರಕ್ಕೆ ನೂರು ಅಂಕ ಪಡೆದ ಕು.ದೀಕ್ಷಾ ಅವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಪ್ರಾಂಶುಪಾಲರಾದ ಜೋರ್ಜ್ ಟಿ.ಎಸ್ ಸ್ವಾಗತಿಸಿದರು. ವಿಜ್ಞಾನ ಶಿಕ್ಷಕಿ ಶಿಲ್ಪಾ ಕಾರ್ಯಕ್ರಮವನ್ನು ನಿರೂಪಿಸಿದರು. ಮುಖ್ಯಶಿಕ್ಷಕ ತೋಮಸ್ ಏ.ಕೆ ವಂದಿಸಿದರು.










