


ಶಿಶಿಲ: ಶಿಶಿಲ ಗ್ರಾಮದ ಆಚಾರಿಪಾಲು ನಿವಾಸಿ ಸತೀಶ ಗೋಖಲೆ(63) ಅವರು ಶುಕ್ರವಾರದಂದು ಕಲ್ಕತ್ತಾದಲ್ಲಿ ನಿಧನ ಹೊಂದಿದ್ದಾರೆ.
ಇವರು ಶಿಶಿಲ ಮೂಲದವರಾಗಿದ್ದು, ಕಳೆದ ಹಲವಾರು ವರ್ಷಗಳಿಂದ ಕಲ್ಕತ್ತಾದಲ್ಲಿ ಹೋಟೆಲ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು. ತಮ್ಮ ಮೂಲಗ್ರಾಮದ ಅಭಿವೃದ್ಧಿಗೆ ಸದಾ ತೊಡಗಿದ್ದ ಅವರು ಶಿಶಿಲ ಗ್ರಾಮದ ದೇವಾಲಯ, ಶಾಲೆ ಸೇರಿದಂತೆ ಅನೇಕ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಸಹಾಯ ಸಹಕಾರ ನೀಡುತ್ತಿದ್ದರು.
ಮೃತರು ಪತ್ನಿ,ಮಗಳು ಮತ್ತು ಅಳಿಯ, ಮೊಮ್ಮಗಳನ್ನು ಅಗಲಿದ್ದಾರೆ.








