ನೆಲ್ಯಾಡಿ ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆಯಲ್ಲಿ ಪೋಷಕರಿಗೆ “ಪಾಲನೆ ಮತ್ತು ಕೌಟುಂಬಿಕ ಸಂಬಂಧಗಳು” ಮಾಹಿತಿ ಕಾರ್ಯಾಗಾರ

ಶೇರ್ ಮಾಡಿ

ನೆಲ್ಯಾಡಿ: ಮಕ್ಕಳ ಮನೋವಿಕಾಸ ಮತ್ತು ಪೋಷಕರ ಜವಾಬ್ದಾರಿ ಕುರಿತು ನೆಲ್ಯಾಡಿ ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆಯಲ್ಲಿ ಮಂಗಳವಾರದಂದು “ಪಾಲನೆ ಮತ್ತು ಕೌಟುಂಬಿಕ ಸಂಬಂಧಗಳು” ಎಂಬ ಮಹತ್ವದ ಮಾಹಿತಿ ಕಾರ್ಯಾಗಾರ ನಡೆಯಿತು.

ಗುತ್ತಿಗಾರು, ನೆಟ್ಟಣ ಚರ್ಚ್‌ನ ಧರ್ಮಗುರು ಫಾ.ಆದರ್ಶ ಜೋಸೆಫ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು “ಹಿಂದಿನ ಪೋಷಕರು ಮಕ್ಕಳನ್ನು ನೈತಿಕ ಮೌಲ್ಯಗಳೊಂದಿಗೆ ಬೆಳೆಸಿದರೆ, ಇಂದಿನ ಪೋಷಕರು ತಂತ್ರಜ್ಞಾನ ಮತ್ತು ಆಸೆ-ಆಕಾಂಕ್ಷೆಗಳ ನಡುವೆ ತಮ್ಮ ಮಕ್ಕಳನ್ನು ಬೆಳೆಸುವಲ್ಲಿ ಸಮಸ್ಯೆ ಎದುರಿಸುತ್ತಿದ್ದಾರೆ, ಮುಂಬರುವ ಕಾಲದಲ್ಲಿ ಮಕ್ಕಳ ಮಾನಸಿಕ ಬೆಳವಣಿಗೆಗೆ ತೊಂದರೆಯಾಗುವಂತಿರುವ ಅತಿಯಾದ ಮೊಬೈಲ್ ಬಳಕೆಯ ದುಷ್ಪರಿಣಾಮಗಳ ಬಗ್ಗೆ ಎಚ್ಚರಿಕೆಯನ್ನು ನೀಡಿದ ಅವರು, “ನಿರ್ಲಿಪ್ತ ಮನಸ್ಸು, ಶಿಷ್ಟಾಚಾರದ ಕೊರತೆ ಹಾಗೂ ಸಮಾಜದೊಂದಿಗೆ ಕಡಿದುಹೋಗುವ ಸಂಬಂಧ – ಇವೆಲ್ಲದರ ಬೇರು ಮೊಬೈಲ್ ನಲ್ಲಿದೆ,” ಎಂದು ಗಂಭೀರವಾಗಿ ಅಭಿಪ್ರಾಯ ವ್ಯಕ್ತಪಡಿಸಿದರು. “ಪೋಷಕರು ತಮ್ಮ ಮಕ್ಕಳ ಶಾಲೆಯೊಂದಿಗೆ ನಿಕಟ ಬಾಂಧವ್ಯ ಬೆಳೆಸಿಕೊಳ್ಳುವ ಮೂಲಕ ಮಕ್ಕಳ ನೈತಿಕ, ಬೌದ್ಧಿಕ ಹಾಗೂ ಶೈಕ್ಷಣಿಕ ಬೆಳವಣಿಗೆಯಲ್ಲಿ ಸಹಭಾಗಿತ್ವ ಇಟ್ಟುಕೊಳ್ಳಬೇಕು” ಎಂದರು.

ಕಾಲೇಜಿನ ಪ್ರಾಂಶುಪಾಲರಾದ ಫಾ.ಡಾ.ವರ್ಗೀಸ್ ಕೈಪನಡ್ಕ ಅವರು ಮಾತನಾಡಿ, “ವಿದ್ಯಾರ್ಥಿಗಳು ವಿದ್ಯಾಸಂಸ್ಥೆಯಲ್ಲಿ ಶಿಸ್ತಿನ್ನು ರೂಡಿಸಿಕೊಳ್ಳಬೇಕು. ಪೋಷಕರು ತಮ್ಮ ಮಕ್ಕಳಿಗೆ ಮನಃಪೂರ್ವಕವಾಗಿ ಸಮಯ ನೀಡುವ ಮೂಲಕ ಗಾಢ ಸಂಬಂಧವನ್ನು ಬೆಳೆಸಬೇಕು,” ಎಂದು ಸಲಹೆ ನೀಡಿದರು.

ಕಾಲೇಜಿನ ಸಂಚಾಲಕ ಫಾ.ಜೈಸನ್ ಸೈಮನ್ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ಫಾ.ಶ್ಯಾಮುವೆಲ್, ಮುಖ್ಯಶಿಕ್ಷಕ ಜಾರ್ಜ್ ಕೆ. ತೋಮಸ್, ಜೋಸ್ ಪ್ರಕಾಶ್, ಸನ್ನಿ ಕೆ. ಉಪಸ್ಥಿತರಿದ್ದರು .

ಕಾಲೇಜಿನ ಮುಖ್ಯಶಿಕ್ಷಕ ಜಾರ್ಜ್ ಕೆ ತೋಮಸ್ ಸ್ವಾಗತಿಸಿದರು, ಹಿರಿಯಶಿಕ್ಷಕಿ ರಾಜಮ್ಮ ಕಾರ್ಯಕ್ರಮ ನಿರೂಪಿಸಿದರು, ಜೋಸ್ ಪ್ರಕಾಶ್ ವಂದಿಸಿದರು.

  •  

Leave a Reply

error: Content is protected !!