


ನೆಲ್ಯಾಡಿ ಶ್ರೀರಾಮ ವಿದ್ಯಾಲಯ ಸೂರ್ಯನಗರದಲ್ಲಿ ಆಗೋಸ್ಟ್ 8ರಂದು ನಡೆಯಲಿರುವ ಶ್ರೀ ವರಮಹಾಲಕ್ಷ್ಮಿ ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆಯು ಶುಕ್ರವಾರದಂದು ವಿದ್ಯಾಲಯದ ಆಡಳಿತ ಮಂಡಳಿಯ ಕಾರ್ಯದರ್ಶಿ ಮೂಲಚಂದ್ರ ಕಾಂಚನ ಅವರು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಅಧ್ಯಕ್ಷೆ ಸುಪ್ರೀತಾ ರವಿಚಂದ್ರ ಹೊಸವಕ್ಲು, ಉಪಾಧ್ಯಕ್ಷೆ ಸುಮನ, ಕಾರ್ಯದರ್ಶಿಯಾಗಿ ಸೌಮ್ಯ ಜಯರಾಜ್, ಕೋಶಾಧಿಕಾರಿ ಸುಮಲತಾ ಸದಸ್ಯರಾದ ಪ್ರಿಯಾ ಕರ್ವೇಲು, ವಿಮಲ ಬೊನ್ಯಸಾಗು, ವಿಶಾಲಾಕ್ಷಿ ಕೊಲ್ಯೊಟ್ಟು, ನಮಿತ ಕೊಲ್ಯೊಟ್ಟು, ಕುಮುದ, ವಿಶಾಲ ಕೊಲ್ಯೊಟ್ಟು, ಪ್ರತಿಭಾ ಕೊಲ್ಯೊಟ್ಟು, ಪೂರ್ಣಿಮಾ ನೆಲ್ಯಾಡಿ ಶಾಲಾ ಮುಖ್ಯಶಿಕ್ಷಕ ಗಣೇಶ್ ವಾಗ್ಲೆ, ಶಾಲಾ ಆಡಳಿತ ಮಂಡಳಿಯ ಸದಸ್ಯರು, ಮಾತೆಯರು, ಶಿಕ್ಷಕ ವೃಂದದವರು ಉಪಸ್ಥಿತರಿದರು.









