ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಸಮಾಜಶಾಸ್ತ್ರ ವಿಭಾಗದ ವತಿಯಿಂದ ಜೀವನ ದಾರಿ ಆಶ್ರಮಕ್ಕೆ ಶೈಕ್ಷಣಿಕ ಭೇಟಿ

ಶೇರ್ ಮಾಡಿ

ನೇಸರ ಮಾ.25: ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾ ವಿದ್ಯಾಲಯ ಸಮಾಜಶಾಸ್ತ್ರ ವಿಭಾಗದ ವತಿಯಿಂದ ದಿನಾಂಕ 24.3.2022 ರಂದು ವಿಕಾಸ ಜನ ಸೇವಾ ಟ್ರಸ್ಟ್ ಕುಶಾಲನಗರ ತಾಲೂಕು ಕೊಡಗು ಜೀವನ ದಾರಿ ಆಶ್ರಮಕ್ಕೆ ಶೈಕ್ಷಣಿಕ ಭೇಟಿಯನ್ನು ಹಮ್ಮಿಕೊಳ್ಳಲಾಯಿತು. ಈ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ ರಮೇಶ್ ಎಚ್ ಕೆ ಆಶ್ರಮದ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿಯನ್ನು ನೀಡಿದರು.

ಪ್ರಥಮ ದ್ವಿತೀಯ ಹಾಗೂ ತೃತೀಯ ಸಮಾಜಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಈ ಅಧ್ಯಯನ ಭೇಟಿಯ ಪ್ರಯೋಜನವನ್ನು ಪಡೆದುಕೊಂಡು ಆಶ್ರಮವಾಸಿಗಳಿಗೆ ಹಣಕಾಸು ಹಣ್ಣು-ಹಂಪಲು ತರಕಾರಿ ಇತ್ಯಾದಿಗಳನ್ನು ನೀಡಿ ಸಹಕರಿಸಿದರು. ವಿದ್ಯಾರ್ಥಿಗಳು ಪ್ರಜ್ಞಾ ಇವರ ನಾಯಕತ್ವದಲ್ಲಿ ಹಲವಾರು ಆಟೋಟ ಸ್ಪರ್ಧೆಗಳನ್ನು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಶ್ರಮವಾಸಿಗಳಿಗೆ ಏರ್ಪಡಿಸಿದರು. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀ ಮನೋಹರ ಹಾಗೂ ಉಪನ್ಯಾಸಕಿ ಆರತಿ ಕೆ ಮಾರ್ಗದರ್ಶನವನ್ನು ನೀಡಿದರು.

—ಜಾಹೀರಾತು—

Leave a Reply

error: Content is protected !!