









ಮಾನ್ಯ: ಗೊಲ್ಲ ಸಮಾಜ ಸಂಘ ಮಾನ್ಯ ಇದರ ನೂತನ ಕಾರ್ಯಾಲಯವನ್ನು ಸಂಘದ ಅಧ್ಯಕ್ಷ ನವೀನ್ ಚಂದ್ರ ಮಾಸ್ತರ್ ಅವರು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಾಲಯವನ್ನು ಉದ್ಘಾಟಿಸಿ, ಸಂಘದ ಬೆಳವಣಿಗೆಗೆ ಎಲ್ಲ ಸದಸ್ಯರು ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಮಂಜುನಾಥ ಡಿ. ಮಾನ್ಯ, ರಾಧಾಕೃಷ್ಣ ಎಂ.ಕೆ., ಮಣಿಕಂಠ ಮಾನ್ಯ, ಮುದ್ದುಕೃಷ್ಣ ಸಿ.ಎಚ್., ಸೀತಾರಾಮ ಎಂ., ಶ್ರೀನಿವಾಸ ಎಂ.ಎಚ್., ಈಶ್ವರ ಕೊಡಗಿ, ಕಿಶೋರ ಪುದುಕೋಳಿ, ಸುಧೀರ್ ಮೇಗಿನಡ್ಕ, ದಿನೇಶ್ ಕೊಡಗಿ, ದಿನೇಶ್ ಎಂ.ಕೆ., ಗಿರೀಶ್ ಗೊಲ್ಲ, ಮೋಹನ ಎಂ.ಜಿ., ಚಂದ್ರೇಶ್ ಮಾನ್ಯ ಸೇರಿದಂತೆ ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು.
ಮಂಜುನಾಥ ಡಿ. ಮಾನ್ಯ ಸ್ವಾಗತಿಸಿದರು, ದಿನೇಶ್ ಎಂ.ಕೆ. ವಂದಿಸಿದರು.



