ಜೇಸಿಐ ಆಲಂಕಾರಿನ ವತಿಯಿಂದ ಕಿರಿಯ ಪವರ್ ಮ್ಯಾನ್ ಚಿದಾನಂದ ರಿಗೆ ಸನ್ಮಾನ

ಶೇರ್ ಮಾಡಿ

ನೇಸರ ಎ.19: ಜೇಸಿಐ ಆಲಂಕಾರಿನ ವತಿಯಿಂದ ಆಯೋಜಿಸಲ್ಪಟ್ಟ, ಜೇಸಿಐ ಭಾರತದ “ಸೆಲ್ಯುಟ್ ದ ಸೈಲೆಂಟ ವರ್ಕರ್” ಕಾರ್ಯಕ್ರಮದ ಅಂಗವಾಗಿ ಕಿರಿಯ ಪವರ್ ಮ್ಯಾನ್ ಚಿದಾನಂದ ಎಸ್ ಇವರನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ರಮವು ಆಲಂಕಾರಿನಲ್ಲಿ ನಡೆಯಿತು.
ಚಿದಾನಂದ ಇವರು ಆಲಂಕಾರು ಪರಿಸರದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಜನ ಮನ್ನಣೆಗೆ ಪಾತ್ರರಾಗಿದ್ದಾರೆ. ಈ ವೇಳೆಯಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಮೆಸ್ಕಾಂ ಇಲಾಖೆಯ ಜೆಇ ಮತ್ತು ಆಲಂಕಾರು ಜೇಸಿ ಘಟಕದ ಖಜಾಂಚಿಯೂ ಆದ ಜೇಸಿ.ಪ್ರೇಮ್ ಕುಮಾರ್ ರವರು, ಚಿದಾನಂದ ಮತ್ತು ಅವರ ತಂಡದ ಕಾರ್ಯಕ್ಷಮತೆಯನ್ನು ವಿವರಿಸಿದರು.
ಜೇಸಿಐ ಆಲಂಕಾರು ಘಟಕದ ಅಧ್ಯಕ್ಷರಾದ ಜೇಸಿ.ಅಜಿತ್ ಕುಮಾರ್ ರೈ ಯವರು ಅದ್ಯಕ್ಷೀಯ ಮಾತುಗಳನ್ನಾಡಿದರು. ಈ ಸಂದರ್ಭದಲ್ಲಿ ಘಟಕದ ಪೂರ್ವಾಧ್ಯಕ್ಷರಾದ ಜೇಸಿ.ಪ್ರದೀಪ್ ರೈ ಮನವಳಿಕೆ, ಜೇಸಿ.ಹೇಮಲತಾ ಪ್ರದೀಪ್ ಬಾಕಿಲ, ಮಮತಾ ಅಂಬರಾಜೆ ಮತ್ತು ಘಟಕದ ಸದಸ್ಯರು ಉಪಸ್ಥಿತರಿದ್ದರು. ಘಟಕದ ಪೂರ್ವಾಧ್ಯಕ್ಷರಾದ ಜೇಸಿ.ಪ್ರದೀಪ್ ಬಾಕಿಲರವರು ಸನ್ಮಾನಿತರ ಪರಿಚಯ ಮತು ಸನ್ಮಾನ ಪತ್ರ ವಾಚಿಸಿದರು. ಘಟಕದ ಕಾರ್ಯದರ್ಶಿ ಜೇಸಿ.ಚೇತನ್ ಎಂ ಧನ್ಯವಾದ ಸಮರ್ಪಿಸಿದರು.

—ಜಾಹೀರಾತು—

Leave a Reply

error: Content is protected !!