ಪರಿಸರ ಪ್ರೇಮಿ ಗೋಳಿತೊಟ್ಟು ಮೆಸ್ಕಾಂನ ಪವರ್ ಮ್ಯಾನ್ ದುರ್ಗಾ ಸಿಂಗ್ ರಿಗೆ ‘ಪ್ರಜಾವಾಣಿ’ ಕಚೇರಿಯಲ್ಲಿ ಸನ್ಮಾನ

ಶೇರ್ ಮಾಡಿ

ನೇಸರ ಜೂ.25: ದಕ್ಷಿಣ ಕನ್ನಡ, ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ತೆರೆಮರೆಯ ಕಾಯಿಯಂತಿದ್ದುಕೊಂಡು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ‘ಪ್ರಜಾವಾಣಿ’ ಮಂಗಳೂರು ಬ್ಯೂರೊದ ಕಚೇರಿಯಲ್ಲಿ ಶನಿವಾರ(ಜೂ.25) ಸನ್ಮಾನಿಸಲಾಯಿತು.
ಮಿಯಾವಕಿ ಕಾಡು ಬೆಳೆಸುವ ಪರಿಸರ ಪ್ರೇಮಿ ಗೋಳಿತೊಟ್ಟು ಮೆಸ್ಕಾಂನ ಪವರ್ ಮ್ಯಾನ್ ದುರ್ಗಾ ಸಿಂಗ್ ರವರ ಪರಿಸರ ಕಾಳಜಿಯನ್ನು ಗುರುತಿಸಿ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸನ್ಮಾನ ಸ್ವೀಕರಿಸಿದ ಸಾಧಕರು. “ಪ್ರಜಾವಾಣಿ” ಮಂಗಳೂರು ಬ್ಯೂರೋ ಮುಖ್ಯಸ್ಥ ಗಣೇಶ ಚಂದನಶಿವ, “ಡೆಕ್ಕನ್ ಹೆರಾಲ್ಡ್” ಮಂಗಳೂರು ಬ್ಯೂರೋ ಮುಖ್ಯಸ್ಥ ಹರ್ಷ, ಹಿರಿಯ ವರದಿಗಾರ ಉದಯ್ ಯು., ಪ್ರಸಾರಣ ವಿಭಾಗದ ವ್ಯವಸ್ಥಾಪಕ ಪ್ರಕಾಶ ನಾಯಕ್ ಉಪಸ್ಥಿತರಿದ್ದರು.

ವೀಕ್ಷಿಸಿ SUBSCRIBERS ಮಾಡಿ🙏🏻

Leave a Reply

error: Content is protected !!