ಅಖಿಲ ಕರ್ನಾಟಕ ತುಳು ಒಕ್ಕೂಟದ ವತಿಯಿಂದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಗೆ ಅಭಿನಂದನೆ

ಶೇರ್ ಮಾಡಿ

ನೇಸರ ಜು.25: ರಾಜ್ಯ ಸಭೆಗೆ ನಾಮನಿರ್ದೇಶನಗೊಂಡ ಧರ್ಮಸ್ಥಳದ ಧರ್ಮಾಧಿಕಾರಿ ರಾಜಶ್ರೀ ಡಾ.ಡಿ.ವೀರೇಂದ್ರ ಹೆಗ್ಗಡೆಯವರನ್ನು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಅಖಿಲ ಭಾರತ ತುಳು ಒಕ್ಕೂಟ ಹಾಗೂ ವಿವಿಧ ತುಳು ಒಕ್ಕೂಟಗಳ ಪದಾಧಿಕಾರಿಗಳು ಭೇಟಿಯಾಗಿ ಅಭಿನಂದಿಸಿ ಆಶೀರ್ವಾದ ಪಡೆದರು.
ಒಕ್ಕೂಟದ ಗೌರವಾಧ್ಯಕ್ಷರಾದ ಬಿ.ಜಯಕರ ಶೆಟ್ಟಿ ಇಂದ್ರಾಳಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಎ.ಸಿ.ಭಂಡಾರಿ, ಉಪಾಧ್ಯಕ್ಷರಾದ ದಿವಾಕರ ಶೆಟ್ಟಿ ಸಾಂಗ್ಲಿ, ಉಮೇಶ್ ಸಾಯಿ ರಾಮ್ ಕಲ್ಲುಗುಡ್ಡೆ, ಚಂದ್ರಶೇಖರ ದೇವಾಡಿಗ ಮೂಡಬಿದ್ರೆ, ಒಕ್ಕೂಟದ ಕಾರ್ಯದರ್ಶಿ ಗಂಗಾಧರ ಕಿದಿಯೂರು, ಕೋಶಾಧಿಕಾರಿ ಚೈತನ್ಯ ಎಂ.ಜಿ. ಪ್ರಭಾಕರ ಭಂಡಾರಿ, ಹರೀಶ್ ನೀರುಮಾರ್ಗ, ತಾರಾನಾಥ ಬೋಳಾರ್, ಪಿ.ಎ.ಪೂಜಾರಿ ಉಪಸ್ಥಿತರಿದ್ದರು
.

Leave a Reply

error: Content is protected !!