ಕ್ರೀಡಾಕೂಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ದಕ್ಷಿಣ ಮಧ್ಯ ಕ್ಷೇತ್ರೀಯ ಮಟ್ಟಕ್ಕೆ ಆಯ್ಕೆ

ಶೇರ್ ಮಾಡಿ

ಪುತ್ತೂರು: ವಿದ್ಯಾಭಾರತಿ ಕರ್ನಾಟಕ, ಹಾಗೂ ಬಾಲ ಭಾರತಿ ವಿದ್ಯಾಲಯ, ಬಳ್ಳಾರಿ ಇವರ ಜಂಟಿ ಆಶ್ರಯದಲ್ಲಿ ಬಾಲ ಭಾರತಿ ವಿದ್ಯಾಲಯ, ಬಳ್ಳಾರಿ ಕ್ರೀಡಾಂಗಣದಲ್ಲಿ ಅಕ್ಟೋಬರ್ 12 ಮತ್ತು 13 ರಂದು ನಡೆದ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ, ಪುತ್ತೂರು ಇಲ್ಲಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿ, ಕರ್ನಾಟಕ, ತೆಲಂಗಣ, ಆಂಧ್ರ ಪ್ರದೇಶ ರಾಜ್ಯಗಳನ್ನು ಒಳಗೊಂಡ ದಕ್ಷಿಣ ಮಧ್ಯ ಕ್ಷೇತ್ರೀಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
14ರ ವಯೋಮಾನದ ಬಾಲ ವರ್ಗದ ಬಾಲಕಿಯರ ವಿಭಾಗದಲ್ಲಿ ಶ್ರೀವರ್ಣಾ(ಪಾಲೆತ್ತಡಿ ಧರ್ಣಪ್ಪ ಗೌಡ, ಮಮತಾ.ಪಿ. ದಂಪತಿ ಪುತ್ರಿ) ಎತ್ತರ ಜಿಗಿತ (ಪ್ರಥಮ), ಉದ್ದ ಜಿಗಿತ (ಪ್ರಥಮ), 80 ಮೀಟರ್ ಹರ್ಡಲ್ಸ್ (ಪ್ರಥಮ), 4100 ಮೀಟರ್ ರಿಲೇ (ಪ್ರಥಮ), ಕೃತಿ,ಕೆ(ಬನ್ನೂರು ಕೊರಗಪ್ಪ ಗೌಡ, ವನಿತಾ.ಎ ದಂಪತಿ ಪುತ್ರಿ) 600 ಮೀಟರ್ (ಪ್ರಥಮ), 400 ಮೀಟರ್(ದ್ವಿತೀಯ), 4100 ಮೀಟರ್ ರಿಲೇ(ಪ್ರಥಮ), ಡಿಂಪಲ್ ಶೆಟ್ಟಿ 200 ಮೀಟರ್(ತೃತೀಯ), 100 ಮೀಟರ್(ದ್ವಿತೀಯ), ಉದ್ದ ಜಿಗಿತ(ತೃತೀಯ), 4100 ಮೀಟರ್ ರಿಲೇ (ಪ್ರಥಮ), ಅಮೃತಾ.ಬಿ.ಎ (ಬನ್ನೂರು ಪಟ್ಟೆ ಅಮರನಾಥ್, ಲತಾ ಕುಮಾರಿ ದಂಪತಿ ಪುತ್ರಿ) 600 ಮೀಟರ್ (ತೃತೀಯ), 4100 ಮೀಟರ್ ರಿಲೇ (ಪ್ರಥಮ), ಬಹುಮಾನ ಗಳಿಸಿದ್ದಾರೆ. ಬಾಲಕರ ವಿಭಾಗದಲ್ಲಿ ಕೃಪಾಲ್.ಪಿ.ಕೆ (ಕೆಮ್ಮಾಯಿಯ ಪ್ರಕಾಶ್.ಬಿ, ಸುನೀತಾ ಸಿ.ಎಚ್ ದಂಪತಿ ಪುತ್ರ) 600 ಮೀಟರ್ (ದ್ವಿತೀಯ), 400 ಮೀಟರ್(ತೃತೀಯ) ಅಭಿಶ್ಯಾಮ(ಪರ್ಲಡ್ಕ ಮುರಳೀಧರ್, ರಾಜೇಶ್ವರಿ ದಂಪತಿ ಪುತ್ರ) ಎತ್ತರ ಜಿಗಿತ (ದ್ವಿತೀಯ)ಬಹುಮಾನ ಗಳಿಸಿರುತ್ತಾರೆ.
17ರ ವಯೋಮಾನದ ಕಿಶೋರ ವರ್ಗದ ಬಾಲಕಿಯರ ವಿಭಾಗದಲ್ಲಿ ಅನ್ನಿಕಾ.ಕೆ (ಚಾರ್ವಾಕ ಎ.ಎಸ್.ಐ ಕೃಷ್ಣಪ್ಪ.ಎಂ, ಶಿಕ್ಷಕಿ ವಾಣಿಶ್ರೀ ದಂಪತಿ ಪುತ್ರಿ) 3000 ಮೀಟರ್ (ಪ್ರಥಮ), 1500 ಮೀಟರ್ (ತೃತೀಯ), ಬಿ.ಲಿಖಿತಾ ರೈ (ಚಣಿಲ ಬಿ.ಜಗನ್ನಾಥ್ ರೈ, ಗೀತಾ.ಜೆ.ರೈ ದಂಪತಿ ಪುತ್ರಿ) 4100 ಮೀಟರ್ ರಿಲೇ (ದ್ವಿತೀಯ), 4400 ಮೀಟರ್ ರಿಲೇ (ಪ್ರಥಮ), 400 ಮೀಟರ್ (ಪ್ರಥಮ), ವಂಶಿ.ಬಿ.ಕೆ (ಬಪ್ಪಳಿಗೆ ಕಮಲಾಕ್ಷ, ಜಯಲತಾ ದಂಪತಿ ಪುತ್ರಿ) 200 ಮೀಟರ್ (ತೃತೀಯ), 100 ಮೀಟರ್ ಹರ್ಡಲ್ಸ್ (ದ್ವಿತೀಯ), 4100 ಮೀಟರ್ ರಿಲೇ (ದ್ವಿತೀಯ), 4400 ಮೀಟರ್ ರಿಲೇ (ಪ್ರಥಮ), ರಿದ್ಧಿ.ಸಿ.ಶೆಟ್ಟಿ ( ಪುಂಡಿಕಾಯಿ ಚಿದಾನಂದ ಶೆಟ್ಟಿ, ಸತ್ಯವತಿ.ಸಿ.ಶೆಟ್ಟಿ ದಂಪತಿ ಪುತ್ರಿ) 4100 ಮೀಟರ್ ರಿಲೇ (ದ್ವಿತೀಯ), 4400 ಮೀಟರ್ ರಿಲೇ (ಪ್ರಥಮ), ಸಾನ್ವಿ.ಎಸ್.ಪಿ. (ಪಳಂಬೆ ಯೋಧ ಡಿ.ಸುಂದರ ಪೂಜಾರಿ, ಶಿಕ್ಷಕಿ ಭವಿತಾ.ಕೆ ದಂಪತಿ ಪುತ್ರಿ) 100 ಮೀಟರ್ (ತೃತೀಯ), 4100 ಮೀಟರ್ ರಿಲೇ (ದ್ವಿತೀಯ), 4400 ಮೀಟರ್ ರಿಲೇ (ಪ್ರಥಮ), ಸಮೃದ್ಧಿ.ಜೆ.ಶೆಟ್ಟಿ (ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ, ಹರಿಣಾಕ್ಷಿ.ಜೆ.ಶೆಟ್ಟಿ ದಂಪತಿ ಪುತ್ರಿ) ಎತ್ತರ ಜಿಗಿತ (ತೃತೀಯ), ಉದ್ದ ಜಿಗಿತ (ದ್ವಿತೀಯ), ಶ್ರದ್ಧಾಲಕ್ಷ್ಮೀ(ತಾರಿಗುಡ್ಡೆ ರವಿಶಂಕರ್, ಅನುಪಮಾ ದಂಪತಿ ಪುತ್ರಿ) ಟ್ರಿಪಲ್ ಜಂಪ್ (ತೃತೀಯ), ಬಹುಮಾನ ಗಳಿಸಿರುತ್ತಾರೆ. ಬಾಲಕರ ವಿಭಾಗದಲ್ಲಿ ಚರಣ್ ಕುಮಾರ್ (ಅಳಿಕೆ ದೇವಳಗುಳಿ ಕೃಷ್ಣ ಕುಮಾರ್, ಪ್ರೇಮಾ ದಂಪತಿ ಪುತ್ರ) 3000 ಮೀಟರ್(ದ್ವಿತೀಯ), 5 ಕಿಲೋಮೀಟರ್ ನಡಿಗೆ (ಪ್ರಥಮ), ಸಚಿತ್.ಪಿ.ಕೆ(ಕೆಮ್ಮಾಯಿಯ ಪ್ರಕಾಶ್.ಬಿ, ಸುನೀತಾ ಸಿ.ಎಚ್ ದಂಪತಿ ಪುತ್ರ) 400 ಮೀಟರ್(ತೃತೀಯ) ಪ್ರಥಮ್.ಎಂ.ಪಿ (ಪಡ್ನೂರು ಪದ್ಮಪ್ಪ ಪೂಜಾರಿ, ಮಾಲತಿ.ಬಿ. ದಂಪತಿ ಪುತ್ರ) ಚಕ್ರ ಎಸೆತ (ದ್ವಿತೀಯ) ಬಹುಮಾನ ಗಳಿಸಿರುತ್ತಾರೆ. ದೈಹಿಕ ಶಿಕ್ಷಣ ವಿಭಾಗ ಮುಖ್ಯಸ್ಥರಾದ ಭಾಸ್ಕರ ಗೌಡ ಮುಂಗ್ಲಿ ಮನೆಯವರ ಮಾರ್ಗದರ್ಶನದಲ್ಲಿ ಹಿರಿಯ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಆಶಾಲತಾ, ಶ್ರೀಮತಿ ನಮಿತಾ, ದೀಪಕ್, ಶ್ರೀಮತಿ ರಶ್ಮಿ,ಪವನ್ ಕುಮಾರ್ ಇವರ ಸಹಕಾರದಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ಗಿರೀಶ್ ಕಣಿಯಾರು ಮತ್ತು ಶ್ರೀಮತಿ ವಾಣಿಶ್ರೀ ಇವರುಗಳು ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ತರಬೇತುಗೊಳಿಸಿರುತ್ತಾರೆ ಎಂದು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Leave a Reply

error: Content is protected !!