ಸಹಾಯಹಸ್ತ ಲೋಕಸೇವಾ ಚಾರಿಟೇಬಲ್ ಟ್ರಸ್ಟ್(ರಿ) ದ.ಕ, ಕರ್ನಾಟಕ ಇವರಿಂದ ಸಹಾಯಧನ ವಿತರಣೆ

ಶೇರ್ ಮಾಡಿ

ಸಹಾಯಹಸ್ತ ಲೋಕಸೇವಾ ಚಾರಿಟೇಬಲ್ ಟ್ರಸ್ಟ್ ಇವರು ಸುಮಾರು 5 ವರುಷಗಳಿಂದ ಧಾನಿಗಳ ಸಹಕಾರದಲ್ಲಿ ಹಲವಾರು ಬಡ ಜನರ ಕಷ್ಟಕ್ಕೆ ನೇರವಾಗುತ್ತಿದ್ದಾರೆ.

ಎ.24 ರಂದು ಪುತ್ತೂರು ಮಹತೋಬಾರ ಮಹಾಲಿಂಗೇಶ್ವರ ದೇವರ ಸನ್ನಿದಾನದಲ್ಲಿ ಕರುಳು ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿರುವ ಮಂಗಳೂರಿನ ಗೌರವ್ ಎಂಬ 14 ವರ್ಷದ ಬಾಲಕನ ಚಿಕಿತ್ಸೆಗೆ ನೆರವಾಗಲು 17,259 ರೂಪಾಯಿಯ ಚೆಕ್ ನ್ನು ದಾನಿಗಳ ಸಹಕಾರದಿಂದ ಹಾಗೂ ಶಶಿoದ್ರ ಜಂಕಲ ಇವರ ಸಹಕಾರದಲ್ಲಿ ಶ್ರೀ ಕಾಳಿಕಾಂಬಾ ಗೊಂಬೆ ಬಳಗ ಬರಿಮಾರ್ ಇದರ ಮಾಲಕರಾದ ರಜನೀಶ್ ಇವರು ವಿತರಿಸಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಡಿ.ಎಸ್. ಒಡ್ಯ, ಸತ್ಯನಾರಾಯಣ ಭಟ್, ಕೋಶಾಧಿಕಾರಿ ಗಿರೀಶಾಮ್ಸ್, ಹಾಗೂ ಶ್ರೀ ಕೃಷ್ಣ ಯುವಕ ಮಂಡಲ ಸಿಟಿಗುಡ್ಡೆ ಇದರ ಪದಾಧಿಕಾರಿಗಳು ಉಪಸ್ಥಿತರಿದ್ದರು. ಟ್ರಸ್ಟಿನ ಕಾರ್ಯದರ್ಶಿ ಮನೋಹರ್ ಪಲಯಮಜಲು ಸ್ವಾಗತಿಸಿ ಸಹಕಾರ ನೀಡುತ್ತಿರುವ ದಾನಿಗಳಿಗೆ ಹಾಗೂ ಸೇವಾಮಾಣಿಕ್ಯರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

Leave a Reply

error: Content is protected !!