ಕಡಬ: ಕಡತ ವಿಲೇವಾರಿ ವಿಳಂಬಗೊಂಡ ಬಗ್ಗೆ ವಿಚಾರಿಸಲು ತೆರಳಿದ ಪತ್ರಕರ್ತನಿಗೆ ದಬಾಯಿಸಿದ ತಾಲೂಕು ಕಛೇರಿ ಸಿಬ್ಬಂದಿ Kadaba Taluk Office

ಶೇರ್ ಮಾಡಿ

ಕಡಬ: ಕಡಬ ತಾಲೂಕು ಕಚೇರಿಯಲ್ಲಿ ವಿಲೇವಾರಿಯಾಗದೆ 5 ತಿಂಗಳಿನಿಂದ ಉಳಿದ 94ಸಿ ಕಡತದ ಬಗ್ಗೆ ಮಾಹಿತಿ ಪಡೆಯಲು ತೆರಳಿದ ಪತ್ರಕರ್ತರೊಬ್ಬರಿಗೆ ಕಡತ ವಿಲೇವಾರಿ ಸಿಬಂದಿ ಅನುಚಿತವಾಗಿ ವರ್ತಿಸಿ ದಬಾಯಿಸಿದ ಅರೋಪ ವ್ಯಕ್ತವಾಗಿದೆ.

ಕಳೆದ 5 ತಿಂಗಳ ಹಿಂದೆ ಸುಬ್ರಹ್ಮಣ್ಯದ ಮಹಿಳೆಯೋರ್ವರು 94 ಸಿ ಅರ್ಜಿ ಸಲ್ಲಿಸಿದ್ದರು. ಬಳಿಕ ವಿಲೇವಾರಿಯಾಗಲಿಲ್ಲ ಈ ಬಗ್ಗೆ ಸುಬ್ರಹ್ಮಣ್ಯ ಗ್ರಾಮದ ಕಡತ ವಿಲೇವಾರಿ ಮಾಡುವ ಸಿಬ್ಬಂದಿ ಬಳಿ ತೆರಳಿ ಕಡಬದ ಪತ್ರಕರ್ತರೋರ್ವರು ವಿಚಾರಿಸುವ ವೇಳೆ ತಾನು ದಿನಪತ್ರಿಕೆಯ ವರದಿಗಾರನೆಂದು ಪರಿಚಯಿಸಿಕೊಂಡಿದ್ದಾರೆ. ಈ ವೇಳೆ ಕಡತ ವಿಲೇವಾರಿ ಮಾಡುವ ಸಿಬ್ಬಂದಿ “ಪತ್ರಕರ್ತರು ಎಂದು ಪರಿಚಯಿಸಿಕೊಂಡು ಇಲ್ಲಿಗೆ ಬರಬೇಡಿ ಎಂದು ದಬಾಯಿಸಿದ್ದಾರೆ. ಅಲ್ಲದೆ ಕಡತ ಬೇಕಾದರೆ ಉಪತಹಸೀಲ್ದಾರ, ಟಪಾಲು ನಿರ್ವಹಣೆ ಮಾಡುವ ಸಿಬ್ಬಂದಿ ಜೊತೆ ಅಲ್ಲಿ ವಿಚಾರಿಸಿ, ನಾನು ಆ ದಾಖಲೆಯನ್ನು ವಿಲೇವಾರಿ ಮಾಡುವುದಿಲ್ಲ ” ಎಂದು ದಬಾಯಿಸಿದ್ದಾರೆ.

ಈ ಬಗ್ಗೆ ತಹಸೀಲ್ದಾರ್ ರಿಗೆ ಮತ್ತು ಉಪತಹಸೀಲ್ದಾರ್ ರಿಗೆ ಮೌಖಿಕ ದೂರು ನೀಡಿದ್ದು, ಕಡತ ಪರಿಶೀಲಿಸಿ ವಿಲೇವಾರಿ ಮಾಡಲಾಗುವುದು ಎಂದು ಹೇಳಿದ್ದರಲ್ಲದೆ, ಈ ಬಗ್ಗೆ ಕಚೇರಿಗೆ ಬರುವ ಸಾರ್ವಜನಿಕರೊಂದಿಗೆ ಸಭ್ಯತೆಯಿಂದ ವರ್ತಿಸಲು ತಿಳಿ ಹೇಳುವುದಾಗಿ ತಹಸೀಲ್ದಾರ್ ಪತ್ರಕರ್ತರಿಗೆ ತಿಳಿಸಿದ್ದಾರೆ.

Leave a Reply

error: Content is protected !!