ಒಕ್ಕಲಿಗ ಗೌಡ ಸಂಘ ಗ್ರಾಮ ಸಮಿತಿ ಇಚಿಲಂಪಾಡಿ ಇವರಿಂದ ಉಳ್ಳಾಕ್ಲು ದೈವಸ್ಥಾನದ ಪಟ್ಟ ಪರಕೆಯ ಕಟ್ಟೆಯ ಸೇವೆಯ ಬಾಬ್ತು ಹಸ್ತಾಂತರ

ಶೇರ್ ಮಾಡಿ

ನೇಸರ ಜ25:ಒಕ್ಕಲಿಗ ಗೌಡ ಸಂಘ ಗ್ರಾಮ ಸಮಿತಿ ಇಚಿಲಂಪಾಡಿ ಇವರಿಂದ ಉಳ್ಳಾಕ್ಲು ದೈವಸ್ಥಾನದ ಪಟ್ಟ ಪರಕೆ ಯ ಕಟ್ಟೆಯ ಸೇವೆಯ ಬಾಬ್ತು ರೂ. 65,000 ವನ್ನು ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮುಕ್ತೇಸರರಾದ ಶ್ರೀ ಶುಭಕರ ಹೆಗಡೆ ಅವರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಒಕ್ಕಲಿಗ ಗೌಡ ಗ್ರಾಮ ಸಮಿತಿ ಇಚಿಲಂಪಾಡಿಯ ಅಧ್ಯಕ್ಷರಾದ ಭಾಸ್ಕರ ಗೌಡ ಒಡ್ಯೆತ್ತಡ್ಕ , ಕಾರ್ಯದರ್ಶಿ ವಿಶ್ವನಾಥ ಗೌಡ ಕೋರಮೇರು, ಯುವ ಒಕ್ಕಲಿಗ ಗೌಡ ಸಂಘ ನೆಲ್ಯಾಡಿ ವಲಯದ ಅಧ್ಯಕ್ಷರಾದ ವಸಂತ ಗೌಡ ಬಿಜೇರು, ಉಳ್ಳಾಕ್ಲು ಸೇವಾ ಸಮಿತಿ ಅಧ್ಯಕ್ಷರಾದ ಹರೀಶ್ ಗೌಡ ನೇರ್ಲ, ಬೀಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಸಮಿತಿಯ ಕೋಶಾಧಿಕಾರಿ ಕೇಶವ ಗೌಡ ಅಲೆಕ್ಕಿ ಇವರು ಉಪಸ್ಥಿತರಿದ್ದರು.

ಜಾಹೀರಾತು

Leave a Reply

error: Content is protected !!