ಆಟೋ ಬಾಡಿಗೆ ಸೋಗಿನಲ್ಲಿ ಪ್ರಯಾಣಿಕನಿಂದ 3.5 ಲಕ್ಷ ನಗದು, 2ಮೊಬೈಲ್ ದರೋಡೆ..!!

ಶೇರ್ ಮಾಡಿ

ಆಟೋ ಬಾಡಿಗೆ ಸೋಗಿನಲ್ಲಿ ಪ್ರಯಾಣಿಕನಿಂದ ದರೋಡೆಕೋರರು ದರೋಡೆಗೈದು, ಹಲ್ಲೆ ನಡೆಸಿದ ಘಟನೆ ಸುಳ್ಯದ ಹಳೆಗೇಟು ಬಳಿ‌ ಸೆ.18ರ ರಾತ್ರಿ ಸುಮಾರು 11:15 ಗಂಟೆಗೆ ನಡೆದಿದೆ.

ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಕಾರುಗುಂದ ಗ್ರಾಮದ ನಿವಾಸಿ ದರ್ಶನ್‌ ‌(27ವ)ವಂಚನೆಗೆ ಒಳಗಾದವರು.ಸೆ.18ರಂದು ವೈಯಕ್ತಿಕ ಕೆಲಸದ ನಿಮಿತ್ತ ಸುಳ್ಯಕ್ಕೆ ಬಂದು, ಅದೇ ದಿನ ರಾತ್ರಿ ಸುಮಾರು 11:15 ಗಂಟೆಗೆ ಊರಿಗೆ ಹಿಂತಿರುಗುವ ಸಲುವಾಗಿ, ಸುಳ್ಯ ಬಸ್ಸು ನಿಲ್ದಾಣಕ್ಕೆ ತೆರಳುವರೇ ಸುಳ್ಯ ಕಸಬಾ ಗ್ರಾಮದ ಹಳೆಗೇಟು ಎಂಬಲ್ಲಿ ಆಟೋರಿಕ್ಷಾ ವೊಂದನ್ನು ಹತ್ತಿರುತ್ತಾರೆ. ಈ ವೇಳೆ ಆಟೋದ ಹಿಂಬದಿ ಸೀಟಿನಲ್ಲಿ ಇಬ್ಬರು ಪ್ರಯಾಣಿಕರು ಕೂತಿದ್ದರು.

ದರ್ಶನ್‌ ಆಟೋದಲ್ಲಿ ಕುಳಿತ ಕೂಡಲೇ ಚಾಲಕ ಹಾಗೂ ಪ್ರಯಾಣಿಕರಿಬ್ಬರು ಸೇರಿ ಅವರ ಕೈಯಲ್ಲಿದ್ದ ಬ್ಯಾಗ್‌‌ ನ್ನು ಕಿತ್ತುಕೊಳ್ಳಲು ಪ್ರಯತ್ನಿಸಿರುತ್ತಾರೆ. ಪ್ರತಿರೋಧಿಸಿದಾಗ ದುಷ್ಕರ್ಮಿಗಳು ದರ್ಶನ್‌ಗೆ ಹಲ್ಲೆ ನಡೆಸಿ, ಬ್ಯಾಗನ್ನು ಕಿತ್ತುಕೊಂಡು ಅವರನ್ನು ಮೂವರು ಸೇರಿ ರಿಕ್ಷಾದಿಂದ ದೂಡಿ ಹಾಕಿ ಆಟೋದಲ್ಲಿ ಪರಾರಿಯಾಗಿರುತ್ತಾರೆ.

ಬ್ಯಾಗಿನಲ್ಲಿ ವ್ಯವಹಾರದ ಹಣ ಒಟ್ಟು 3.5 ಲಕ್ಷ ರೂಪಾಯಿ, ಎರಡು ಮೊಬೈಲ್ ಗಳು, ವಿವಿಧ ಗುರುತಿನ ಚೀಟಿಗಳು ಹಾಗೂ ಮೂರು ಎಟಿಎಂ ಕಾರ್ಡ್ ಗಳಿದ್ದು, ಘಟನೆಯ ಸಮಯ ಅಟೋ ರಿಕ್ಷಾದ ನೋಂದಣಿ ಸಂಖ್ಯೆಯನ್ನು ದರ್ಶನ್‌ ರವರು ಗಮನಿಸಿರುವುದಿಲ್ಲ ಎಂಬುದಾಗಿ ಸುಳ್ಯ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

Leave a Reply

error: Content is protected !!