


ಕೊಕ್ಕಡ: ಸುದ್ದಿ ಸಮೂಹ ಸಂಸ್ಥೆಗಳ ಪಿ.ಆರ್.ಓ ಮತ್ತು ಕನ್ಸಲ್ಟೆಂಟ್ ಆಗಿರುವ ರಾಘವ ಶರ್ಮರವರ ತಂದೆ, ಕೃಷಿಕ ನಿಡ್ಲೆ ಕೃಷ್ಣ ಭಟ್ (78) ಹೃದಯಾಘಾತದಿಂದ ನಿಧನರಾಗಿದ್ದಾರೆ.
ಅಲ್ಪಕಾಲದ ಅಸೌಖ್ಯದಿಂದ ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದ ಭಟ್ ಅವರು ಶನಿವಾರ ತಡರಾತ್ರಿ 12.30ರ ಸುಮಾರಿಗೆ ವಿಧಿವಶರಾದರು.
ಮೃತರು ಪತ್ನಿ, ಮಗ ರಾಘವ ಶರ್ಮ, ಮಗಳು ರಮ್ಯ ಹಾಗೂ ಸೊಸೆ ಪೃಥ್ವಿ ರಾಘವ ಶರ್ಮರನ್ನು ಅಗಲಿದ್ದಾರೆ.





