

ನೆಲ್ಯಾಡಿ: ಗೋಳಿತ್ತೊಟ್ಟು ಗ್ರಾಮದ ಕುವೆತ್ತಿಮಾರು ನಿವಾಸಿ, ಬಿಜೆಪಿ ಹಿರಿಯ ಮುಖಂಡ, ಕೃಷಿಕ ಅಣ್ಣು ಗೌಡ (79ವ.)ರವರು ವಯೋಸಹಜ ಅನಾರೋಗ್ಯದಿಂದ ನ. 1ರಂದು ಬೆಳಿಗ್ಗೆ ನಿಧನರಾದರು.
ಅಣ್ಣು ಗೌಡ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲೂ ಗುರುತಿಸಿಕೊಂಡಿಧ್ಧರು. ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಕ್ಷೇತ್ರಗಳಿಗೆ ಅತೀ ಹೆಚ್ಚಿನ ಆರ್ಥಿಕ ಹಾಗೂ ಇನ್ನಿತರ ನೆರವು ನೀಡುತ್ತಿದ್ದರು.
ಮೃತರಿಗೆ ಪತ್ನಿ ,ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರು ಇದ್ದಾರೆ






