ನೆಲ್ಯಾಡಿಯ ಅಶ್ವಿನಿ ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ಆರ್ತ್ರೋಸ್ಕೋಪಿಕ್ ಮೊಣಕಾಲು (ಕೀಹೋಲ್) ಶಸ್ತ್ರಚಿಕಿತ್ಸೆ

ಶೇರ್ ಮಾಡಿ

ನೆಲ್ಯಾಡಿ: ನೆಲ್ಯಾಡಿ ಅಶ್ವಿನಿ ಆಸ್ಪತ್ರೆಯಲ್ಲಿ ಕಡಬ ತಾಲೂಕಿನಲ್ಲಿ ಮೊದಲ ಬಾರಿಗೆ ಆರ್ತ್ರೋಸ್ಕೋಪಿಕ್ ಮೊಣಕಾಲು (ಕೀಹೋಲ್) ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸುವ ಮೂಲಕ ಅಸ್ಥಿರೋಗ ಚಿಕಿತ್ಸೆಯಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಲಾಗಿದೆ.

ಈ ಶಸ್ತ್ರಚಿಕಿತ್ಸೆಯನ್ನು ಪರಿಣತ ವೈದ್ಯರ ತಂಡವಾದ ಡಾ.ಶರತ್ ಬಾಳೆಮನೆ, ಡಾ.ಶಮಂತ್ ವೈ.ಕೆ, ಮತ್ತು ಡಾ.ನಿಶಾಂತ್ ಅವರು ಯಶಸ್ವಿಯಾಗಿ ನಡೆಸಿದರು. ಅನಸ್ಥೇಶಿಯಾ ವೈದ್ಯ ಡಾ.ಎಸ್.ಎಂ. ಸಹಾಯಕರಾಗಿ ಪ್ರಸಾದ್, ಮೋಹನ್, ಬಿನ್ಸಿ, ಲೀಲಾವತಿ, ಮತ್ತು ವಸಂತಿ ಅವರು ಸಹಕರಿಸಿದರು.

ಆರ್ತ್ರೋಸ್ಕೋಪಿಕ್ ಮೊಣಕಾಲು ಶಸ್ತ್ರಚಿಕಿತ್ಸೆ (ಕೀಹೋಲ್ ಶಸ್ತ್ರಚಿಕಿತ್ಸೆ) ಕಡಿಮೆ ಕತ್ತರಿಸುವ ಮೂಲಕ ನಡೆಯುವುದರಿಂದ ಶಸ್ತ್ರಚಿಕಿತ್ಸೆಯ ನಂತರದ ನೋವು ಕಡಿಮೆ, ಚೇತರಿಕೆ ವೇಗವಾಗಿ ಹಾಗೂ ಆಸ್ಪತ್ರೆ ವಾಸ್ತವ್ಯ ಅವಧಿ ಕಡಿಮೆಯಾಗುತ್ತದೆ. ಅಶ್ವಿನಿ ಆಸ್ಪತ್ರೆಯಲ್ಲಿ ಈ ಆಧುನಿಕ ಶಸ್ತ್ರಚಿಕಿತ್ಸಾ ತಂತ್ರಜ್ಞಾನವನ್ನು ಪರಿಚಯಿಸುವುದರಿಂದ ಕಡಬ ತಾಲೂಕಿನ ರೋಗಿಗಳು ಇನ್ನು ಮುಂದೆ ಚಿಕಿತ್ಸೆಗಾಗಿ ದೂರದ ನಗರಗಳಿಗೆ ಹೋಗುವ ಅಗತ್ಯ ಕಡಿಮೆಯಾಗಲಿದೆ.

Leave a Reply

error: Content is protected !!