ಪೆರಿಯಶಾಂತಿಯಲ್ಲಿ➔ಕಾಡಾನೆ ಪ್ರತ್ಯಕ್ಷ ಹೆದರಿ ಆನೆ ಸಮೀಪವೇ ಬೈಕ್ ಬಿದ್ದು ಜೀವಭಯದಿಂದ ಓಡಿದ ಕುಟ್ರುಪ್ಪಾಡಿ ಗ್ರಾಮದ ಯುವಕರು

ಶೇರ್ ಮಾಡಿ

ಪೆರಿಯಶಾಂತಿ: ಕುಟ್ರುಪ್ಪಾಡಿ ಗ್ರಾಮದ ಬಜೆತ್ತಡ್ಕ ನಿವಾಸಿ ಧರ್ಮಪಾಲ ಹಾಗೂ ರಮೇಶ್ ಎಂಬವರು ಕೊಕ್ಕಡದ ಸಂಬಂಧಿಕರ ಮನೆಗೆಂದು ಇಚಿ

ಲಂಪಾಡಿ ಮೂಲಕ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಪೆರಿಯಶಾಂತಿಯಲ್ಲಿ ಕಾಡಾನೆ ರಸ್ತೆ ದಾಟಿದ್ದು, ದಿಕ್ಕು ತೋಚದ ಬೈಕ್ ಸವಾರ ಹಠಾತ್ ಬ್ರೇಕ್ ಹಾಕಿದ ಕಾರಣ ಕಾಡಾನೆಯ ಪಕ್ಕವೇ ಬೈಕ್ ಮಗುಚಿ ಬಿದ್ದು ಸವಾರ ಮತ್ತು ಸಹ ಸವಾರ ರಸ್ತೆ ಬದಿಗೆ ಎಸೆಯಲ್ಪಟ್ಟಿದ್ದು, ಬಳಿಕ ಕೂಡಲೇ ಎದ್ದು ಬೈಕ್ ಬಿಟ್ಟು ಅರ್ಧ ಕಿ.ಮೀ ದೂರ ಓಡಿ ಹೋಗಿದ್ದಾರೆ ಎನ್ನಲಾಗಿದೆ. ಬೈಕ್ ಕಂಡು ಅಲ್ಲಿ ಜನ ನೆರೆದಿದ್ದು, ಬೈಕನ್ನು ಎತ್ತಿ ಸಹಕರಿಸಿದ್ದಾರೆ. ಘಟನೆಯಲ್ಲಿ ಓರ್ವ ಸವಾರನ ಕಾಲಿಗೆ ಸಣ್ಣ ಗಾಯವಾಗಿದ್ದು, ಮತ್ತು ಸಹ ಸವಾರನ ಕೈಗೆ ಪರಚಿದ ಗಾಯವಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ .

Leave a Reply

error: Content is protected !!