ಶ್ರೀ ಧ.ಮ.ಕಾಲೇಜು ಹಿರಿಯ ವಿದ್ಯಾರ್ಥಿ ಸಂಘ ಉಜಿರೆ ಹಾಗೂ ರೋಟರಿ ಕ್ಲಬ್ ಬೆಳ್ತಂಗಡಿ ವತಿಯಿಂದ ಮಾತೃಶ್ರೀ ಶ್ರೀಮತಿ ಹೇಮಾವತಿ ಹೆಗ್ಗಡೆ ಅವರಿಗೆ ಅಭಿನಂದನೆ

ಶೇರ್ ಮಾಡಿ

ನೇಸರ ಎ.25: ಮಂಗಳೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ದ ಹಾಗೂ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘದ ಗೌರವಾಧ್ಯಕ್ಷೆ ಯೂ ಆಗಿರುವ ಮಾತೃಶ್ರೀ ಶ್ರೀಮತಿ ಹೇಮಾವತಿ ಹೆಗ್ಗಡೆಯವರನ್ನು ಹಿರಿಯ ವಿದ್ಯಾರ್ಥಿಗಳ ಸಂಘ ಹಾಗೂ ರೋಟರಿ ಕ್ಲಬ್ ಬೆಳ್ತಂಗಡಿ ಇದರ ವತಿಯಿಂದ ಜಂಟಿಯಾಗಿ ಅಭಿನಂದಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಶ್ರೀ ಧ.ಮ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರೂ,ನಿವೃತ್ತ ಪೋಲಿಸ್ ಎಸ್.ಪಿ.ಪೀತಾಂಬರ ಹೆರಾಜೆ, ರೋಟರಿ ಕ್ಲಬ್ ಬೆಳ್ತಂಗಡಿ ಇದರ ಅಧ್ಯಕ್ಷರಾದ ಶರತ್ ಕೃಷ್ಣ ಪಡುವೆಟ್ನಾಯ, ತಿಮ್ಮಪ್ಪ ಗೌಡ ಬೆಳಾಲು, ಬಿ.ಕೆ ಧನಂಜಯ ರಾವ್, ಶ್ರೀಮತಿ ಮನೋರಮ, ಶ್ರೀಮತಿ ಡಾ.ಶಲೀಪ್ ಕಾವೇರಿಯಪ್ಪ, ಶ್ರೀಧರ ಕೆವಿ, ಅರುಣ್ ಕುಮಾರ್, ಅಬ್ಬೂಬಕ್ಕರ್, ಪ್ರಶಾಂತ್, ಶೈಲೇಶ್, ಪ್ರಕಾಶ್ ನಾರಾಯಣ್, ಡಾ.ಎ.ಜಯಕುಮಾರ ಶೆಟ್ಟಿ, ವಿದ್ಯಾ ಕುಮಾರ್ ಕಾಂಚೋಂಡು ಇವರುಗಳು ಉಪಸ್ಥಿತರಿದ್ದರು.

—ಜಾಹೀರಾತು—

Leave a Reply

error: Content is protected !!